ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಗ್ಲಾ ಆಟಗಾರರ ಪ್ರತಿಭಟನೆ: ಸಂಧಾನಕ್ಕೆ ಮೊರ್ತಜಾ

Last Updated 23 ಅಕ್ಟೋಬರ್ 2019, 16:21 IST
ಅಕ್ಷರ ಗಾತ್ರ

ಢಾಕ: ವೇತನ ಮತ್ತು ಸೌಲಭ್ಯಗಳಿಗಾಗಿ ಅನಿರ್ದಿಷ್ಟ ಮುಷ್ಕರ ಹೂಡಿರುವ ಬಾಂಗ್ಲಾದೇಶ ಕ್ರಿಕೆಟಿಗರ ಜೊತೆ ಸಂಧಾನ ನಡೆಸುವ ಜವಾಬ್ದಾರಿಯನ್ನು ಏಕದಿನ ತಂಡದ ನಾಯಕ ಮಷ್ರಫೆ ಮೊರ್ತಜಾ ಅವರನ್ನು ಪ್ರಧಾನಿ ಶೇಕ್ ಹಸೀನಾ ವಹಿಸಿದ್ದಾರೆ.

ಮೊರ್ತಜಾ ಮಧ್ಯಸ್ಥಿಕೆಯಲ್ಲಿ ಆಟಗಾರರು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಪದಾಧಿಕಾರಿಗಳನ್ನು ಭೇಟಿ ಮಾಡುವರು. ಈ ವಿಷಯವನ್ನು ಮಂಡಳಿ ಸಿಇಒ ನಿಜಾಮುದ್ದೀನ್ ಚೌಧರಿ ತಿಳಿಸಿದ್ದಾರೆ ಎಂದು ಕ್ರಿಕ್ ಇನ್ಫೊ ವರದಿ ಮಾಡಿದೆ.

ಅಕ್ಟೋಬರ್ 21ರಂದು ಆಟಗಾರರು ಮುಷ್ಕರ ಆರಂಭಿಸಿದ್ದಾರೆ. ಹೀಗಾಗಿ ನವೆಂಬರ್ 3ರಂದು ಆರಂಭವಾಗಲಿರುವ ಭಾರತ ಎದುರಿನ ಟ್ವೆಂಟಿ–20 ಸರಣಿ ನಡೆಯುವುದರ ಬಗ್ಗೆ ಅನುಮಾನ ಮೂಡಿದೆ.

ಈ ನಡುವೆ, ಆಟಗಾರರ ಬೇಡಿಕೆಗಳಲ್ಲಿ ಪ್ರಮುಖವಾದವುಗಳನ್ನು ಈಡೇರಿಸಲು ಮಂಗಳವಾರ ರಾತ್ರಿ ಮಂಡಳಿ ಒಪ್ಪಿಕೊಂಡಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT