ರಾಯಪುರ: ವೃಂದಾ ದಿನೇಶ್ ಅವರ ಭರ್ಜರಿ ಶತಕದ ನೆರವಿನಿಂದ ಕರ್ನಾಟಕ ತಂಡವು ಬಿಸಿಸಿಐ 23 ವರ್ಷದೊಳಗಿನ ಮಹಿಳೆಯರ ಟಿ20 ಕ್ರಿಕೆಟ್ ಟ್ರೋಫಿ ಟೂರ್ನಿಯಲ್ಲಿ 55 ರನ್ಗಳಿಂದ ಬರೋಡಾ ತಂಡವನ್ನು ಮಣಿಸಿತು.
ರಾಯಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡವು ವೃಂದಾ ದಿನೇಶ್ (117; 69ಎ, 4x15, 6x5) ಅವರ ಬ್ಯಾಟಿಂಗ್ ಬಲದಿಂದ 20 ಓವರ್ಗಳಲ್ಲಿ ಎರಡು ವಿಕೆಟ್ಗೆ 181 ರನ್ ಗಳಿಸಿತು.
ಗುರಿಯನ್ನು ಬೆನ್ನಟ್ಟಿದ ಬರೋಡಾ ತಂಡವು ಕರ್ನಾಟಕದ ಬೌಲಿಂಗ್ ದಾಳಿಯ ಎದುರು 20 ಓವರ್ಗಳಲ್ಲಿ 126 ರನ್ಗಳಿಗೆ ಕುಸಿಯಿತು. ಕರ್ನಾಟಕದ ಪರ ಪೂಜಾ ಕುಮಾರಿ ಮತ್ತು ಅನನ್ಯಾ ಹೆಗ್ಡೆ ಕ್ರಮವಾಗಿ ನಾಲ್ಕು, ಮೂರು ವಿಕೆಟ್ ಪಡೆದರು.