ಕೊನೆಯ ನಿಮಿಷದ ವರೆಗೂ ಕಾದಾಡಿದ ಭಾರತ ತಂಡ ಡ್ರಾ ಸಾಧಿಸಿ ನೌಕೌಟ್ ಹಂತದ ಕನಸು ಜೀವಂತವಾಗಿರಿಸಿಕೊಳ್ಳುವ ಭರವಸೆಯಲ್ಲಿತ್ತು. ಆದರೆ 91ನೇ ನಿಮಿಷದಲ್ಲಿ ಪ್ರಣಯ್ ಹಲ್ದರ್ ಎಸಗಿದ ಪ್ರಮಾದ ತಂಡಕ್ಕೆ ಮುಳುವಾಯಿತು. ಪೆನಾಲ್ಟಿ ಅವಕಾಶವನ್ನು ಗೋಲಾಗಿ ಪರಿವರ್ತಿಸಿದ ಜಮಾಲ್ ರಶೀದ್ ಬಹರೇನ್ ತಂಡದಲ್ಲಿ ಸಂಭ್ರಮ ಮೂಡಿಸಿದರು.