<p><strong>ಮಂಗಳೂರು:</strong> ರೋಚಕ ಹೋರಾಟದಲ್ಲಿ ಕೇವಲ ಒಂದು ಪಾಯಿಂಟ್ನಿಂದ ಎದುರಾಳಿ ತಂಡವನ್ನು ಮಣಿಸಿದ ಕರ್ನಾಟಕದ ಬಾಲಕರು ಪದವಿಪೂರ್ವ ವಿದ್ಯಾರ್ಥಿಗಳ ರಾಷ್ಟ್ರಮಟ್ಟದ ನೆಟ್ಬಾಲ್ ಟೂರ್ನಿಯ ಫೈನಲ್ ಪ್ರವೇಶಿಸಿದರು. ಆತಿಥೇಯ ಬಾಲಕಿಯರ ತಂಡವೂ ಪ್ರಶಸ್ತಿ ಸುತ್ತಿಗೆ ಲಗ್ಗೆ ಇರಿಸಿತು. </p>.<p>ಶಾಲಾ ಶಿಕ್ಷಣ ಇಲಾಖೆ ಹಾಗೂ ಮಂಗಳೂರು ತಾಲ್ಲೂಕಿನ ಎಡಪದವು ಸ್ವಾಮಿ ವಿವೇಕಾನಂದ ಪದವಿಪೂರ್ವ ಕಾಲೇಜು ಆಶ್ರಯದಲ್ಲಿ ಪಿಲಿಕುಳದಲ್ಲಿ ನಡೆಯುತ್ತಿರುವ ಟೂರ್ನಿಯ ಬಾಲಕರ ವಿಭಾಗದಲ್ಲಿ ಚಂಡೀಗಢವನ್ನು ಕರ್ನಾಟಕ 31–30ರಲ್ಲಿ ಮಣಿಸಿತು. ನಾಲ್ಕರ ಘಟ್ಟದ ಮತ್ತೊಂದು ರೋಮಾಂಚಕಾರಿ ಹಣಾಹಣಿಯಲ್ಲಿ ಕೇರಳವನ್ನು ಪಂಜಾಬ್ 39–38ರಲ್ಲಿ ಸೋಲಿಸಿತು. </p>.<p>ಬಾಲಕಿಯರ ವಿಭಾಗದಲ್ಲಿ ಆಧಿಪತ್ಯ ಮುಂದುವರಿಸಿದ ಕರ್ನಾಟಕ ಸೆಮಿಫೈನಲ್ನಲ್ಲಿ ಮಹಾರಾಷ್ಟ್ರವನ್ನು 24–14ರಲ್ಲಿ ಮಣಿಸಿತು. ಪಂಜಾಬ್ ವಿರುದ್ಧ ಕೇರಳ 32–27ರಲ್ಲಿ ಜಯ ಸಾಧಿಸಿತು. </p>
<p><strong>ಮಂಗಳೂರು:</strong> ರೋಚಕ ಹೋರಾಟದಲ್ಲಿ ಕೇವಲ ಒಂದು ಪಾಯಿಂಟ್ನಿಂದ ಎದುರಾಳಿ ತಂಡವನ್ನು ಮಣಿಸಿದ ಕರ್ನಾಟಕದ ಬಾಲಕರು ಪದವಿಪೂರ್ವ ವಿದ್ಯಾರ್ಥಿಗಳ ರಾಷ್ಟ್ರಮಟ್ಟದ ನೆಟ್ಬಾಲ್ ಟೂರ್ನಿಯ ಫೈನಲ್ ಪ್ರವೇಶಿಸಿದರು. ಆತಿಥೇಯ ಬಾಲಕಿಯರ ತಂಡವೂ ಪ್ರಶಸ್ತಿ ಸುತ್ತಿಗೆ ಲಗ್ಗೆ ಇರಿಸಿತು. </p>.<p>ಶಾಲಾ ಶಿಕ್ಷಣ ಇಲಾಖೆ ಹಾಗೂ ಮಂಗಳೂರು ತಾಲ್ಲೂಕಿನ ಎಡಪದವು ಸ್ವಾಮಿ ವಿವೇಕಾನಂದ ಪದವಿಪೂರ್ವ ಕಾಲೇಜು ಆಶ್ರಯದಲ್ಲಿ ಪಿಲಿಕುಳದಲ್ಲಿ ನಡೆಯುತ್ತಿರುವ ಟೂರ್ನಿಯ ಬಾಲಕರ ವಿಭಾಗದಲ್ಲಿ ಚಂಡೀಗಢವನ್ನು ಕರ್ನಾಟಕ 31–30ರಲ್ಲಿ ಮಣಿಸಿತು. ನಾಲ್ಕರ ಘಟ್ಟದ ಮತ್ತೊಂದು ರೋಮಾಂಚಕಾರಿ ಹಣಾಹಣಿಯಲ್ಲಿ ಕೇರಳವನ್ನು ಪಂಜಾಬ್ 39–38ರಲ್ಲಿ ಸೋಲಿಸಿತು. </p>.<p>ಬಾಲಕಿಯರ ವಿಭಾಗದಲ್ಲಿ ಆಧಿಪತ್ಯ ಮುಂದುವರಿಸಿದ ಕರ್ನಾಟಕ ಸೆಮಿಫೈನಲ್ನಲ್ಲಿ ಮಹಾರಾಷ್ಟ್ರವನ್ನು 24–14ರಲ್ಲಿ ಮಣಿಸಿತು. ಪಂಜಾಬ್ ವಿರುದ್ಧ ಕೇರಳ 32–27ರಲ್ಲಿ ಜಯ ಸಾಧಿಸಿತು. </p>