ಮನಗೂಳಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6ನೇ ತಗರಗತಿ ಓದುತ್ತಿದ್ದಾಗಲೇ, ಓಟದ ಸ್ಪರ್ಧೆಯಲ್ಲಿ ಭಾಗವಹಿಸಬೇಕೆಂಬ ಉತ್ಸುಕತೆ ಹೊಂದಿ, ದೈಹಿಕ ಶಿಕ್ಷಣ ಶಿಕ್ಷಕ ಎಸ್.ಜಿ.ಇಬ್ರಾಹಿಂಪುರ ಮಾರ್ಗದರ್ಶನದಲ್ಲಿ ನಿತ್ಯ ಬೆಳಿಗ್ಗೆ–ಸಂಜೆ ತರಬೇತಿ ಪಡೆದ ಪ್ರತಿಭೆಯಿದು. ಶಾಲಾ ಅವಧಿಯಲ್ಲಿ ಅಧ್ಯಯನದ ಕಡೆಗೆ ಗಮನ ಹರಿಸುವುದರೊಂದಿಗೆ, ಆಟದ ಅವಧಿಯಲ್ಲಿ ಓಟದ ತರಬೇತಿಯಲ್ಲಿ ತಲ್ಲೀನ.