ತನ್ನ ಸೋಲಿಗೆ ಕಾರಣವಾದ ಕಾಮಧೇನುವಿನಲ್ಲಿದ್ದ ‘ಅಚಿಂತ್ಯ’ ಪ್ರಭಾವ ಹಾಗೂ ವಸಿಷ್ಠ ಮುನಿಯ ‘ಬ್ರಹ್ಮ ತೇಜೋಬಲ’ವನ್ನು ತಾನೂ ಪಡೆಯಬೇಕು ಎಂದು ನಿರ್ಧರಿಸಿ, ಘೋರ ತಪಗೈದು ವಿಶ್ವಾಮಿತ್ರನು ಬ್ರಹ್ಮರ್ಷಿ ಸ್ಥಾನ ಪಡೆಯುತ್ತಾನೆ. ಬಳಿಕ, ಲೋಕಹಿತಕ್ಕೆ ತೊಡಗುತ್ತಾನೆ.
ವಿಶ್ವಾಮಿತ್ರನು ತಪಸ್ಸನ್ನು ಆಚರಿಸುವ ವೇಳೆ ಮೇನಕೆ ಎಂಬ ಅಪ್ಸರೆಯ ರೂಪಕ್ಕೆ ಮೋಹಗೊಂಡು, ಶಕುಂತಲೆಯ ಜನನಕ್ಕೂ ಕಾರಣನಾಗಿ, ತಪಶಕ್ತಿಯನ್ನು ಕಳೆದುಕೊಳ್ಳುತ್ತಾನೆ. ತಪ್ಪಿನ ಅರಿವಾಗಿ, ಅರಿಷಡ್ವರ್ಗಗಳನ್ನು ಜಯಿಸಿ, ನಾಶರಹಿತವಾದ ಬ್ರಹ್ಮರ್ಷಿ ಪದವಿ ಹಾಗೂ ಸಪ್ತರ್ಷಿ ಮಂಡಲದಲ್ಲಿ ಮಹತ್ವದ ಸ್ಥಾನ ಗಳಿಸುತ್ತಾನೆ ಎಂದು ಇತಿಹಾಸದಲ್ಲಿ ಉಲ್ಲೇಖವಾಗಿದೆ. ಈ ಮುನಿಯ ಹೆಸರಿನಲ್ಲಿ ವಿಶ್ವಾಮಿತ್ರಾಸನವಿದೆ.