ನವದೆಹಲಿ: ಭಾರತದ ಪಿ.ವಿ.ಸಿಂಧು ಅವರು ಬಿಡಬ್ಲ್ಯುಎಫ್ ವಿಶ್ವ ಟೂರ್ ಫೈನಲ್ಸ್ ಬ್ಯಾಡ್ಮಿಂಟನ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಪಾದದ ಗಾಯದಿಂದ ಇನ್ನೂ ಚೇತರಿಸಿಕೊಳ್ಳದಿರುವ ಕಾರಣ ಅವರು ಈ ನಿರ್ಧಾರ ತಳೆದಿದ್ದಾರೆ.
2018ರ ಆವೃತ್ತಿಯ ಚಾಂಪಿಯನ್ ಸಿಂಧು ಅವರು, ಆಗಸ್ಟ್ನಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ ಸಂದರ್ಭದಲ್ಲಿ ಗಾಯಗೊಂಡಿದ್ದರು.
ಬಿಡಬ್ಲ್ಯುಎಫ್ ಫೈನಲ್ಸ್ ಚೀನಾದ ಗುವಾಂಗ್ಜುನಲ್ಲಿ ಡಿಸೆಂಬರ್ 14ರಿಂದ ನಡೆಯಲಿದೆ.
ಸಿಂಧು ಹಿಂದೆ ಸರಿದಿರುವುದರಿಂದ ಎಚ್.ಎಸ್. ಪ್ರಣಯ್ ಅವರು ಒಬ್ಬರೇ ಭಾರತದ ಆಟಗಾರನಾಗಿ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ.