ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರ್ಮಿತ್‌ ದೇಸಾಯಿಗೆ ಕಿರೀಟ

ಇಂಡೊನೇಷ್ಯಾ ಓಪನ್‌ ಟೇಬಲ್‌ ಟೆನಿಸ್‌: ಅಮಲ್‌ರಾಜ್‌ಗೆ ಸೋಲು
Last Updated 17 ನವೆಂಬರ್ 2019, 19:52 IST
ಅಕ್ಷರ ಗಾತ್ರ

ಮುಂಬೈ: ಭಾರತದ ಅನುಭವಿ ಆಟಗಾರ ಹರ್ಮಿತ್‌ ದೇಸಾಯಿ ಅವರು ಐಟಿಟಿಎಫ್‌ ಚಾಲೆಂಜ್‌ ಇಂಡೊನೇಷ್ಯಾ ಓಪನ್‌ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌ನಲ್ಲಿ ಭಾನುವಾರ ಪ್ರಶಸ್ತಿ ಗೆದ್ದರು. ಇಂಡೊನೇಷ್ಯಾದ ಬಾಟಮ್‌ನಲ್ಲಿ ನಡೆದ ಚಾಂಪಿಯನ್‌ಷಿಪ್‌ನ ಸಿಂಗಲ್ಸ್ ಫೈನಲ್‌ ಪಂದ್ಯದಲ್ಲಿ ಅವರು ತಮ್ಮದೇ ದೇಶದ ಅಮಲ್‌ರಾಜ್‌ ಅಂಥೋನಿ ಅವರನ್ನು ಸೋಲಿಸಿದರು.

ಜಿದ್ದಾಜಿದ್ದಿನ ಪಂದ್ಯದಲ್ಲಿ ಹರ್ಮಿತ್‌ 11–9, 9–11, 11–9, 11–9, 12–10, 11–9ರಿಂದ ಗೆದ್ದು ಬೀಗಿದರು. ಅವರು ಈ ವರ್ಷದಲ್ಲಿ ಜಯಿಸಿದ ಎರಡನೇ ಪ್ರಶಸ್ತಿ ಇದು.

ಸೆಮಿಫೈನಲ್‌ನಲ್ಲಿ ಹರ್ಮಿತ್‌ ಅವರು ಹಾಂಗ್‌ಕಾಂಗ್‌ನ ಸಿಯು ಹಾಂಗ್‌ ಲ್ಯಾಮ್‌ ಅವರನ್ನು ಪರಾಭವಗೊಳಿಸಿದ್ದರು. ಪುರುಷರ ಡಬಲ್ಸ್‌ನಲ್ಲಿ ಜೊತೆಯಾಗಿ ಕಣಕ್ಕಿಳಿದಿದ್ದ ಅಮಲ್‌ರಾಜ್‌– ಹರ್ಮಿತ್‌ ಸೆಮಿಫೈನಲ್‌ ತಲುಪಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT