1974ರಲ್ಲಿ ನ್ಯೂಜಿಲೆಂಡ್ನಲ್ಲಿ ನಡೆದಿದ್ದ ಕಾಮನ್ವೆಲ್ತ್ ಕೂಟದಲ್ಲಿ ಬೆಳ್ಳಿಪದಕ ಪಡೆದಿದ್ದರು. ಅವರಿಗೆ ಧ್ಯಾನಚಂದ್ ಪುರಸ್ಕಾರ ನೀಡಿ ಗೌರವಿಸಲಾಗಿತ್ತು. ರೈತ ಕುಟುಂಬದಲ್ಲಿ ಜನಿಸಿದ್ದ ಅವರು ಮೋತಿಬಾಗ್ ತಾಲೀಮಿನಲ್ಲಿ ಕುಸ್ತಿ ಕಲಿತಿದ್ದರು. ಹಿರಿಯ ಪೈಲ್ವಾನರಾದ ಗಣಪತರಾವ್ ಅಂಡಾಳಕರ್ ಮತ್ತು ಬಾಲು ಬೈರೆ ಅವರಿಂದ ತರಬೇತಿ ಪಡೆದಿದ್ದರು. 70ರ ದಶಕದಲ್ಲಿ ಮಹಾರಾಷ್ಟ್ರ ಕೇಸರಿ, ರುಸ್ತುಂ ಹಿಂದ್ ಕೇಸರಿ ಮತ್ತು ಮಹಾನ್ ಭಾರತ ಕೇಸರಿ ಪ್ರಶಸ್ರಿಗಳನ್ನು ಗೆದ್ದಿದ್ದರು.