ಬೆಂಗಳೂರು: ತಂಡವು ಅತ್ಯಂತ ಕೆಟ್ಟದಾಗಿ ಬ್ಯಾಟಿಂಗ್ ಮಾಡಿದ ಪಂದ್ಯ ಇದಾಗಿದೆ. ಇದು ಅಕ್ಷಮ್ಯ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. ಭಾನುವಾರ ರಾತ್ರಿ ಕೋಲ್ಕತ್ತ ನೈಟ್ರೈಡರ್ಸ್ ಎದುರು ಹೀನಾಯ ಸೋಲನುಭಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
‘ಲಯನ್ಸ್ ಎದುರಿನ ಪಂದ್ಯದಲ್ಲಿ 200ಕ್ಕಿಂತ ಹೆಚ್ಚು ರನ್ಗಳನ್ನು ಗಳಿ ಸಿದ್ದ ನಮ್ಮ ತಂಡ ಇಲ್ಲಿ ಅತ್ಯಂತ ಕಳಪೆಯಾಗಿ ಆಡಿತು. ಈ ಪಂದ್ಯದ ಎರಡನೇ ಇನಿಂಗ್ಸ್ ಅನ್ನು ಅವಲೋಕನ ಮಾಡುವ ಅಗತ್ಯವೇ ಇಲ್ಲ. ಅತ್ಯಂತ ಕೆಟ್ಟ ಇನಿಂಗ್ಸ್ ಅದು. ಇದನ್ನು ಮರೆತು ಮುಂದಿನ ಪಂದ್ಯದಲ್ಲಿ ಆಡ ಬೇಕಿದೆ. ಬೆಂಗಳೂರಿನಲ್ಲಿ ಗೆಲುವಿನ ಹಾದಿಗೆ ಬರಳಬೇಕಿದೆ’ ಎಂದರು.
‘ಇಲ್ಲಿಯ ಸೈಟ್ ಸ್ಕ್ರೀನ್ ಬಹಳ ಕಿರಿದಾಗಿದೆ. ಬೌಲರ್ ರನ್ ಅಪ್ ಆರಂಭಿಸಿದ ನಂತರ ಪರದೆಯ ಬಳಿ ವ್ಯಕ್ತಿಯೊಬ್ಬರದ ಸುಳಿದಾಟ ದಿಂದಾಗಿ ನನ್ನ ಏಕಾಗ್ರತೆ ಭಂಗ ವಾಗಿತ್ತು. ಆದ್ದರಿಂದ ಔಟಾದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿ ಸಿದರು. ಅವರು ಪಂದ್ಯ ಮೊದಲ ಓವರ್ನಲ್ಲಿಯೇ ಸ್ಲಿಪ್ನಲ್ಲಿದ್ದ ಮನೀಷ್ ಪಾಂಡೆಗೆ ಕ್ಯಾಚ್ ಕೊಟ್ಟಿದ್ದರು.