ರಾಂಚಿ (ಪಿಟಿಐ): ಮೊದಲ ದಿನ ನಿರಾಸೆ ಅನುಭವಿಸಿದ್ದ ಕರ್ನಾಟಕ ಇಲ್ಲಿ ನಡೆಯುತ್ತಿರುವ 53ನೇ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ ಚಾಂಪಿಯನ್ಷಿಪ್ನಲ್ಲಿ ಎರಡನೇ ದಿನ ಒಂದು ಬೆಳ್ಳಿ ಪದಕ ಗೆದ್ದುಕೊಂಡಿತು. ಇದಕ್ಕೆ ಕಾರಣವಾಗಿದ್ದು ಭರವಸೆಯ ಅಥ್ಲೀಟ್ ಎಚ್.ಎಂ. ಜ್ಯೋತಿ.
ಮಹಿಳೆಯರ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಜ್ಯೋತಿ 11.87 ಸೆಕೆಂಡ್ಗಳಲ್ಲಿ ಗುರಿ ಮುಟ್ಟಿ ಈ ಸಾಧನೆ ಮಾಡಿದರು. ಒಎನ್ಜಿಸಿಯ ಧ್ಯುತಿ ಚಂದ್ 11.73 ಸೆಕೆಂಡ್ಗಳಲ್ಲಿ ಗುರಿ ತಲುಪಿ ಚಿನ್ನದ ಸಾಧನೆ ಮಾಡಿದರು. ಈ ವಿಭಾಗದ ಕಂಚು ರೈಲ್ವೆಯ ಮರ್ಲಿನ್ ಕೆ. ಜೋಸೆಫ್ (ಕಾಲ: 11.95ಸೆ.) ಪಾಲಾಯಿತು.
ಆದರೆ, ಜೋಸೆಫ್ ಸೆಮಿಫೈನಲ್ ಹೀಟ್ನಲ್ಲಿ 13 ವರ್ಷಗಳ ಹಿಂದಿನ ದಾಖಲೆಯನ್ನು ಅಳಿಸಿ ಹಾಕಿ ಫೈನಲ್ ತಲುಪಿದ್ದರು. ನಿಗದಿತ ಗುರಿಯನ್ನು ಈ ಅಥ್ಲೀಟ್ 11.35 ಸೆಕೆಂಡ್ಗಳಲ್ಲಿ ಮುಟ್ಟಿದ್ದರು. ಆದರೆ, ಫೈನಲ್ನಲ್ಲಿ ಅವರು ಮೊದಲಿನಂತೆ ಓಡುವಲ್ಲಿ ವಿಫಲರಾದರು. ಈ ಸ್ಪರ್ಧೆಯ ವೇಳೆ ಮಳೆಯೂ ಕಾಡಿತು. ಮಹಿಳೆಯರ 800 ಮೀಟರ್ ಸ್ಪರ್ಧೆಯಲ್ಲಿ ಟಿಂಟು ಲೂಕಾ ಚಿನ್ನ ಜಯಿಸಿದರು.