ಬೆಂಗಳೂರು: ಸ್ಥಳೀಯ ಪ್ರತಿಭೆ ತ್ರಿಶೂಲ್ ಚಿಣ್ಣಪ್ಪ ಇಲ್ಲಿ ಆರಂಭವಾದ ಟಾಟಾ ಸ್ಟೀಲ್ ಸದರ್ನ್ ಇಂಡಿಯಾ ಅಮೆಚೂರ್ ಗಾಲ್ಫ್ ಚಾಂಪಿಯನ್ಷಿಪ್ನ ಮೊದಲ ಸುತ್ತಿನ ಬಳಿಕ ಮುನ್ನಡೆ ಸಾಧಿಸಿದ್ದಾರೆ.
ಕರ್ನಾಟಕ ಗಾಲ್ಫ್ ಸಂಸ್ಥೆ ಕೋರ್ಸ್ನಲ್ಲಿ ನಡೆಯುತ್ತಿರುವ ಟೂರ್ನಿಯ ಮೊದಲ ದಿನದ ಸ್ಪರ್ಧೆ ಕೊನೆಗೊಳಿಸಲು ತ್ರಿಶೂಲ್ 69 ಅವಕಾಶಗಳನ್ನು ಬಳಸಿಕೊಂಡರು.
ವಶಿಷ್ಠ ಪವಾರ್ (70) ಎರಡನೇ ಸ್ಥಾನದಲ್ಲಿದ್ದಾರೆ. ತಲಾ 71 ಅವಕಾಶಗಳನ್ನು ಬಳಸಿಕೊಂಡ ಉದಯನ್ ಮಾನೆ, ನಿಖಿಲ್ ಎಸ್. ಶೇಖಾವತ್ ಮತ್ತು ಅಮನ್ ರಾಜ್ ಜಂಟಿ ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಸೈಯದ್ ಸಕೀಬ್ ಮತ್ತು ಕರಣ್ ಮೊದಲ ಸುತ್ತಿನಲ್ಲಿ ನಿಖರ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಇಬ್ಬರೂ ಕ್ರಮವಾಗಿ 75 ಹಾಗೂ 77 ಅವಕಾಶಗಳನ್ನು ಬಳಸಿಕೊಂಡರು.
ಪ್ರಶಸ್ತಿಯ ಕನಸು ಜೀವಂತವಾಗಿರಿಸಿಕೊಳ್ಳಬೇಕಾದರೆ ಇಬ್ಬರೂ ಎರಡನೇ ಸುತ್ತಿನಲ್ಲಿ ನಿಖರ ಪ್ರದರ್ಶನ ನೀಡುವುದು ಅನಿವಾರ್ಯ.