ನವದೆಹಲಿ: ಈ ಬಾರಿಯ ವಿಶ್ವ ಬಾಕ್ಸಿಂಗ್ ಚಾಂಪಿಯನ್ಷಿಪ್ನಲ್ಲಿ ಭಾರತಕ್ಕೆ ಕನಿಷ್ಠ ಎರಡು ಪದಕಗಳು ಖಚಿತ ಎಂದು ವೃತ್ತಿಪರ ಬಾಕ್ಸಿಂಗ್ ಚಾಂಪಿಯನ್ ವಿಜೇಂದರ್ ಸಿಂಗ್ ಭರವಸೆ ವ್ಯಕ್ತಪಡಿಸಿದರು.
’ಈ ಬಾರಿ ಸ್ಪರ್ಧೆಗೆ ತೆರಳಿರುವ ಭಾರತ ತಂಡದಲ್ಲಿ ಪ್ರತಿಭಾವಂತರು ಇದ್ದಾರೆ. ಶಿವ ಥಾಪ, ವಿಕಾಸ್ ಕೃಷ್ಣ ಮತ್ತು ಮನೋಜ್ ಕುಮಾರ್ ಅವರಂತಹ ಉತ್ತಮ ಬಾಕ್ಸರ್ಗಳು ಇರುವುದರಿಂದ ಇದೇ ಮೊದಲ ಬಾರಿ ಒಂದಕ್ಕಿಂತ ಹೆಚ್ಚು ಪದಕ ಗೆಲ್ಲುವ ಅವಕಾಶ ಭಾರತಕ್ಕೆ ಇದೆ’ ಎಂದು ವಿಜೇಂದರ್ ಸಿಂಗ್ ಹೇಳಿದರು.
‘ಭಾರತದ ಪ್ರಮುಖ ಬಾಕ್ಸರ್ಗಳಿಗೆ ಅಪಾರ ಅನುಭವ ಇದೆ. ವಿಶ್ವ ಚಾಂಪಿಯನ್ಷಿಪ್ ಒಳಗೊಂಡಂತೆ ಮಹತ್ವದ ಕೂಟಗಳಲ್ಲಿ ಪಾಲ್ಗೊಂಡು ಹೆಸರು ಮಾಡಿದ್ದಾರೆ. ಈಗ ಅವರು ತಮ್ಮ ಪೂರ್ಣ ಸಾಮರ್ಥ್ಯವನ್ನು ತೋರಿಸಬೇಕಾಗಿದೆ’ ಎಂದರು.