ಆರಂಭಿಕ ಸಂಕಷ್ಟ: ಮೊದಲ ಇನಿಂಗ್ಸ್ ಆರಂಭಿಸಿದ ಶ್ರೀಲಂಕಾ ತಂಡ ಆರಂಭಿಕ ಸಂಕಷ್ಟ ಎದುರಿಸಿತು. ಎರಡನೇ ಓವರ್ ಬೌಲ್ ಮಾಡಿದ ಉಮೇಶ್ ಯಾದವ್, ಐದನೇ ಎಸೆತದಲ್ಲಿ ದಿಮುತ್ ಕರುಣಾರತ್ನೆ (2) ಅವರನ್ನು ಎಲ್ಬಿಡಬ್ಲ್ಯು ಬಲೆಯಲ್ಲಿ ಸಿಲುಕಿಸಿ ಪ್ರವಾಸಿ ಪಡೆಗೆ ಮೇಲುಗೈ ಒದಗಿಸಿದರು. ವೇಗಿ ಮೊಹಮ್ಮದ್ ಶಮಿ, 15ನೇ ಓವರ್ನ ಎರಡನೇ ಎಸೆತದಲ್ಲಿ ಧನುಷ್ಕಾ ಗುಣತಿಲಕ (16; 37ಎ, 2ಬೌಂ) ಮತ್ತು ಆರನೇ ಎಸೆತದಲ್ಲಿ ಕುಶಾಲ್ ಮೆಂಡಿಸ್ (0) ವಿಕೆಟ್ ಉರುಳಿಸಿ ಆತಿಥೇಯರ ಗಾಯದ ಮೇಲೆ ಉಪ್ಪು ಸವರಿದರು.