ಮೈಸೂರು: ಚಾಮುಂಡಿಬೆಟ್ಟದ ಸಮೀಪವಿರುವ ಎಸ್ಡಿಎಂ ವ್ಯವಸ್ಥಾಪನೆ ಮತ್ತು ಅಭಿವೃದ್ಧಿ ಸಂಸ್ಥೆಯ ಆಶ್ರಯದಲ್ಲಿ ಫೆಬ್ರುವರಿ 5ರಂದು `ಮಾತೃಶ್ರೀ ರತ್ನಮ್ಮ ಹೆಗ್ಗಡೆ ಸ್ಮಾರಕ ವಾರ್ಷಿಕ ಮುಕ್ತ ಚೆಸ್ ಟೂರ್ನಿ 2012~ ನಡೆಯಲಿದೆ.
ಸಂಸ್ಥೆಯ ವೆಲ್ನೆಸ್ ಸೆಂಟರ್ನಲ್ಲಿ ಅಂದು ಬೆಳಿಗ್ಗೆ 9ಕ್ಕೆ ಟೂರ್ನಿ ಆರಂಭವಾಗಲಿದೆ. 10 ಸಾವಿರ ರೂಪಾಯಿ ಮೊತ್ತದ ಪ್ರಶಸ್ತಿ ಇದೆ. ಸಾರ್ವಜನಿಕರು, ವಿದ್ಯಾರ್ಥಿಗಳು, ಚೆಸ್ ಆಟಗಾರರು, ಗ್ರ್ಯಾಂಡ್ ಮಾಸ್ಟರ್ಸ್ ಕೂಡ ಭಾಗವಹಿಸಲು ಅವಕಾಶವಿದೆ. ವಿವರಗಳಿಗೆ ಎ. ಆರ್. ದ್ವಾರಕಾನಾಥ್ (ಮೊಬೈಲ್: 9880364121) ಅವರನ್ನು ಅಥವಾ www.sdmimd.ac.in ವೆಬ್ಸೈಟ್ ಅ್ನು ಸಂಪರ್ಕಿಸಬೇಕು.