ಬೆಂಗಳೂರು: ಉತ್ತಮ ಆಟವಾಡಿದ ಜಿ.ಎಂ.ಟಿ.ಟಿ.ಎ ಕ್ಲಬ್ನ ರೋಹನ್ ಜಮದಗ್ನಿ ಮತ್ತು ಎ.ಸಂಯುಕ್ತಾ ಅವರು ಆರ್.ಎಸ್.ಶಕುಂತಲಾ ಸ್ಮಾರಕ ಟ್ರೋಫಿಗಾಗಿ ನಡೆಯುತ್ತಿರುವ ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಯೂತ್ ಬಾಲಕರ ಮತ್ತು ಬಾಲಕಿಯರ ಸಿಂಗಲ್ಸ್ ವಿಭಾಗದ ಪ್ರಶಸ್ತಿಗಳನ್ನು ಗೆದ್ದರು.
ಬಾಲಕರ ಫೈನಲ್ ಹೋರಾಟದಲ್ಲಿ ರೋಹನ್ 11–3, 11–6, 1–11, 11–7, 11–9ರಲ್ಲಿ ಬಿಎನ್ಎಂ ಕ್ಲಬ್ನ ಕೃಷ್ಣ ಅವರ ಸವಾಲು ಮೀರಿದರು.
ಬಾಲಕಿಯರ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಸಂಯುಕ್ತಾ 7–11, 11–7, 11–5, 8–11, 9–11, 11–8, 11–9ರಲ್ಲಿ ಬಿಎನ್ಎಂ ಕ್ಲಬ್ನ ಎಂ.ವಿ. ಸ್ಫೂರ್ತಿ ವಿರುದ್ಧ ಗೆದ್ದರು.
ಫೈನಲ್ಗೆ ಸ್ಫೂರ್ತಿ: ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಸ್ಪೂರ್ತಿ ಮತ್ತು ಸಂಯಕ್ತಾ ಅವರು ಫೈನಲ್ ಪ್ರವೇಶಿಸಿದರು.
ಸೆಮಿಫೈನಲ್ ಹೋರಾಟಗಳಲ್ಲಿ ಸ್ಫೂರ್ತಿ 11–6, 8–11, 11–13, 12–10, 11–8, 8–11, 11–7ರಲ್ಲಿ ಬಿಎನ್ಎಂ ಕ್ಲಬ್ನ ವಿ.ಖುಷಿ ಎದುರೂ, ಸಂಯುಕ್ತಾ 11–6, 11–9, 11–9, 11–6ರಲ್ಲಿ ಸುಷ್ಮಿತಾ ಬಿದರಿ ವಿರುದ್ಧವೂ ಗೆದ್ದರು.
ಪುರುಷರ ಸಿಂಗಲ್ಸ್ನ ನಾಲ್ಕರ ಘಟ್ಟದ ಹೋರಾಟದಲ್ಲಿ ಬಿಎನ್ಎಂ ಕ್ಲಬ್ನ ಶ್ರೇಯಲ್ ತೆಲಾಂಗ್ 11–8, 11–3, 11–8, 11–7ರಲ್ಲಿ ಎಂಎಸ್ಎಸ್ ಕ್ಲಬ್ನ ದಿನಕರ ನಾಯ್ದು ಎದುರು ಗೆದ್ದರು.
ಇನ್ನೊಂದು ಪಂದ್ಯದಲ್ಲಿ ಸಿ.ಬಿ. ಕ್ಲಬ್ನ ಬಿ.ರಕ್ಷಿತ್ 11–5, 11–7, 5–11, 14–12, 11–4ರಲ್ಲಿ ಸ್ಕೀಸ್ ಅಕಾಡೆಮಿಯ ನೀರಜ್ ರಾಜ್ ಅವರನ್ನು ಮಣಿಸಿ ಫೈನಲ್ಗೆ ಮುನ್ನಡೆದರು.