ನಿಕಟ ಪೈಪೋಟಿ ಇದ್ದ ಎರಡು ಪಂದ್ಯಗಳಲ್ಲಿ ಗೆದ್ದ ಭಾರತವು ಸುಸ್ಥಿತಿಯಲ್ಲಿದೆ. ಒತ್ತಡ ಇರುವುದು ನಮ್ಮ ಮೇಲೆ. ನಾಲ್ಕನೇ ಏಕದಿನ ಪಂದ್ಯದಲ್ಲಿ ಜಯ ಸಾಧಿಸುವುದು ಅಗತ್ಯ ಮಾತ್ರವಲ್ಲ ಅನಿವಾರ್ಯವೂ ಆಗಿದೆ. ಸರಣಿಯ ಮೇಲೆ ಹಿಡಿತ ಉಳಿಸಿಕೊಳ್ಳಲು ಶುಕ್ರವಾರದ ಪಂದ್ಯವು ನಮಗೆ ಮಹತ್ವದ್ದಾಗಿದೆ. 1-2ರಲ್ಲಿ ಹಿನ್ನಡೆ ಅನುಭವಿಸಿದ್ದು ಭಾರಿ ಆಘಾತಕಾರಿ. ಆದರೂ ಈಗಲೇ ನಿರಾಸೆಯಿಂದ ಕೈಚೆಲ್ಲಿ ಕುಳಿತುಕೊಳ್ಳುವುದಿಲ್ಲ. ಮುಂದಿರುವ ಪಂದ್ಯವನ್ನು ಗೆದ್ದ, ಪುಟಿದೆದ್ದು ನಿಲ್ಲಲು ಪ್ರಯತ್ನಿಸುತ್ತೇವೆ. ಮುಂದಿರುವ ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಯೋಚಿಸಿದಾಗ ಈ ಸರಣಿಯಲ್ಲಿ ವಿಜಯ ಸಾಧಿಸಿ ವಿಶ್ವಾಸ ಹೆಚ್ಚಿಸಿಕೊಳ್ಳುವುದು ಅಗತ್ಯ. ಆ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು.