ತವರಿನ ಅಭಿಮಾನಿಗಳ ಬೆಂಬಲ ದೊಂದಿಗೆ ಕಣಕ್ಕಿಳಿದಿದ್ದ ಕಳಿಂಗ ತಂಡ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಅಣಿಯಾಯಿತು. ಇನ್ನೊಂದೆಡೆ ದೆಹಲಿ ಕೂಡಾ ದಿಟ್ಟ ಆಟ ಆಡಿತು. ಹೀಗಾಗಿ ಮೊದಲ ಮೂರು ಕ್ವಾರ್ಟರ್ಗಳ ಆಟ ಗೋಲು ರಹಿತವಾಗಿತ್ತು. ನಾಲ್ಕನೇ ಕ್ವಾರ್ಟರ್ನಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಗುರ್ಜಿಂದರ್ ಚೆಂಡನ್ನು ಗುರಿ ಮುಟ್ಟಿಸಿ ಮಿಂಚಿದರು. ಇದರಿಂದ ತಂಡದ ಗೆಲುವು ಸುಲಭವಾಯಿತು.