‘ಲತಾದೇವಿ ಅವರು ಶ್ರೀರಾಮ್ ಪ್ರಾಪರ್ಟಿಸ್ಗೆ 1 ಎಕರೆ 12 ಗುಂಟೆ ಮಾರಿದ್ದರು. ಅದನ್ನು ಕಡಿಮೆ ಬೆಲೆಗೆ ಮಾರಿದ್ದು, ಬೆಲೆ ಹೆಚ್ಚಾಗಿರುವ ಕಾರಣ ಅಧಿಕ ಬೆಲೆ ಕೊಡಿಸಬೇಕು ಎಂದು ಒತ್ತಡ ಹೇರಿದ್ದರು. ಕಾನೂನು ಪ್ರಕಾರ ಈ ರೀತಿ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದೆ. ಈ ಕಾರಣಕ್ಕೆ ದ್ವೇಷ ಸಾಧನೆ ಮಾಡುತ್ತಿದ್ದಾರೆ. ಜತೆಗೆ, ಈ ಹಿಂದೆ ಮೂರು ಸಲ ಅಮಾನತು ಆಗಿರುವ ವೆಂಕಟರಂಗನ್ ಎಂಬುವರನ್ನು ಪಿಡಿಒ ಮಾಡಲು ನನಗೆ ತೊಂದರೆ ಕೊಡುತ್ತಿದ್ದಾರೆ’ ಎಂದು ತಿಳಿಸಿದ್ದಾರೆ.