ನವದೆಹಲಿ: ನವದೆಹಲಿಯ ಈಶಾನ್ಯ ಭಾಗದಲ್ಲಿ ನಡೆದ ಹಿಂಸಾಚಾರದಲ್ಲಿ 79 ಮನೆಗಳು, 327 ಗುಡಿಸಲುಗಳು ಬೆಂಕಿಗೆ ಆಹುತಿಯಾಗಿವೆ ಎಂದು ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.
ಪೊಲೀಸರ ಪ್ರಕಾರ 41 ಮಂದಿ ಮೃತಪಟ್ಟಿದ್ದಾರೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಗಲಭೆಯಲ್ಲಿ ನೊಂದವರಿಗೆ ಸರ್ಕಾರ ಈವರೆಗೆ ಒಟ್ಟು ₹ 38.75 ಲಕ್ಷ ಪರಿಹಾರ ವಿತರಿಸಿದೆ. ಮೃತರ ಕುಟುಂಬಗಳಿಗೆ ಒಟ್ಟು ₹ 22 ಲಕ್ಷಪರಿಹಾರ ವಿತರಿಸಲಾಗಿದೆ ಎಂದು ವಿವರಿಸಿದರು.
ಈ ಮಧ್ಯೆ, 1000ಕ್ಕೂ ಅಧಿಕ ಸಂತ್ರಸ್ತರು ಮುಸ್ತಾಫಾಬಾದ್ನಲ್ಲಿ ತೆರೆದಿರುವ ಪರಿಹಾರ ಶಿಬಿರಕ್ಕೆ ಕಳೆದ 24 ಗಂಟೆಗಳಲ್ಲಿ ಬಂದಿದ್ದಾರೆ. ಬಹುತೇಕರು ಶಿವಪುರಿ, ಮುಸ್ತಾಫಾಬಾದ್, ಕರವಲ್ ನಗರ್ ಭಾಗದವರು ಎಂದು ಸರ್ಕಾರ ಹೇಳಿದೆ.