ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್ ಮತ್ತು ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ಮತ್ತು ಎಸ್.ಕೆ. ಕೌಲ್ ಅವರನ್ನು ಒಳಗೊಂಡ ಪೀಠ, ಎಫ್ಐಆರ್ ರದ್ದತಿಗೆ ನಿರಾಕರಿಸಿದರೂ, ಬಂಧನದ ಅವಧಿಯನ್ನು ಮತ್ತೆ ನಾಲ್ಕು ವಾರಗಳವರೆಗೆ ವಿಸ್ತರಿಸಿದೆ. ಈ ನಾಲ್ಕು ವಾರಗಳಲ್ಲಿ ಆನಂದ್ ಅವರನ್ನು ಬಂಧಿಸಬಾರದು ಎಂದೂ ಅದು ಪೊಲೀಸರಿಗೆ ಸೂಚನೆ ನೀಡಿದೆ.ಈ ಅವಧಿಯಲ್ಲಿ ಆನಂದ್ ಅವರು, ಅಧೀನ ನ್ಯಾಯಾಲಯದಲ್ಲಿಯೇ ಜಾಮೀನಿಗೆ ಅರ್ಜಿ ಸಲ್ಲಿಸಬಹುದು ಎಂದೂ ಅದು ಹೇಳಿದೆ.