ನವದೆಹಲಿ: ರಾಷ್ಟ್ರೀಯ ಜನತಾ ದಳದ ಜಾರ್ಖಂಡ್ ರಾಜ್ಯ ಘಟಕದ ಮಾಜಿ ಅಧ್ಯಕ್ಷೆ ಅನ್ನಪೂರ್ಣಾದೇವಿ ಅವರು ಸೋಮವಾರ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಜಾರ್ಖಂಡ್ ಮುಖ್ಯಮಂತ್ರಿ ರಘುಬರ್ ದಾಸ್ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ಭೂಪೇಂದ್ರ ಯಾದವ್ ಸಮ್ಮುಖದಲ್ಲಿ ಅವರು ಕಮಲ ಪಾಳಯ ಸೇರಿದರು.
ಅವರು ಬಿಜೆಪಿ ಸೇರುತ್ತಿದ್ದಂತೆ ಆರ್ಜೆಡಿಯಿಂದ ಆರು ವರ್ಷ ಅಮಾನತು ಮಾಡಲಾಗಿದೆ.ವಿರೋಧ ಪಕ್ಷಗಳ ಜೊತೆಗಿನ ಸೀಟು ಹೊಂದಾಣಿಕೆ ಬಗ್ಗೆ ಅನ್ನಪೂರ್ಣ ತೀವ್ರ ಅಸಮಾಧಾನಗೊಂಡಿದ್ದರು.
ಅನ್ನಪೂರ್ಣಾ ಅವರ ಜೊತೆ ಮಾಜಿ ಶಾಸಕ ಜನಾರ್ದನ ಪಾಸ್ವಾನ್ ಅವರೂ ಬಿಜೆಪಿ ಸೇರ್ಪಡೆಗೊಂಡರು.