1. 21ನೇ ಕಾಮನ್ವೆಲ್ತ್ ಕ್ರೀಡಾಕೂಟ ಎಲ್ಲಿ ನಡೆಯುತ್ತಿದೆ?
ಅ) ಗ್ಲಾಸ್ಕೋ ಆ) ಭಾರತ
ಇ) ಗೋಲ್ಡ್ ಕೋಸ್ಟ್ ಈ) ಇಟಲಿ
2. ಈಗಿನ ಕೇಂದ್ರ ಮಾನವ ಸಂಪನ್ಮೂಲ ಸಚಿವರು ಯಾರು?
ಅ) ಸ್ಮೃತಿ ಇರಾನಿ ಆ) ಪ್ರಕಾಶ್ ಜಾವಡೇಕರ್
ಇ) ಅರುಣ್ ಜೇಟ್ಲಿ ಈ) ಪೀಯೂಶ್ ಗೋಯಲ್
3. ಕೆ. ವಿ. ಅಯ್ಯರ್ ಅವರ ‘ರೂಪದರ್ಶಿ’ ಕಾದಂಬರಿಯಲ್ಲಿನ ಪ್ರಸಿದ್ಧ ಚಿತ್ರಕಾರ ಯಾರು?
ಅ) ಬರನಿ ಆ) ರಾಫೆಲ್
ಇ) ಲಿಯನಾರ್ಡೊ ಡಾ ವಿಂಚಿ ಈ) ಮೈಕಲ್ ಏಂಜಲೋ
4. ರಣಧೀರ ಕಂಠೀರವರ ಪ್ರಸಿದ್ಧ ಖಡ್ಗದ ಹೆಸರೇನು?
ಅ) ಉಗ್ರ ನಾರಸಿಂಹ ಆ) ವಿಜಯ ನಾರಸಿಂಹ
ಇ) ಜಯ ನಾರಸಿಂಹ ಈ) ರಣ ನಾರಸಿಂಹ
5. ‘ವಿಶ್ವ ಸಾಮಾಜಿಕ ಉದ್ಯಮ ಸ್ಕೂಲ್’ ಪ್ರಶಸ್ತಿಗೆ ಆಯ್ಕೆಯಾಗಿರುವ ಕನ್ನಡಿಗ ಯಾರು?
ಅ) ನಾರಾಯಣ ಮೂರ್ತಿ ಆ) ಸುದರ್ಶನ್ಇ
) ಜಯರಾಮ್ ಈ) ಹರೀಶ್ ಹಂದೆ
6. ‘ಬಿನಾಕಾ ಗೀತ್ ಮಾಲಾ’ ಯಾವ ರೇಡಿಯೋ ಕೇಂದ್ರದಿಂದ ಪ್ರಸಾರವಾಗುತ್ತಿತ್ತು?
ಅ) ಸಿಲೋನ್ ಆ) ಮುಂಬೈ ಇ) ದೆಹಲಿ ಈ) ಕಲ್ಕತ್ತಾ
7. ಕುದುರೆಮುಖದಲ್ಲಿ ಪ್ರಮುಖವಾಗಿ ಯಾವ ಲೋಹದ ಅದಿರಿನ ನಿಕ್ಷೇಪವಿದೆ?
ಅ) ಸತು ಆ) ತಾಮ್ರ ಇ) ಕಬ್ಬಿಣ ಈ) ತವರ
8. ‘ಪ್ಯಾಸಾ’- ಹಿಂದಿ ಚಲನಚಿತ್ರವನ್ನು ನಿರ್ದೇಶಿಸಿದ ಕನ್ನಡಿಗ ಯಾರು?
ಅ) ಪುಟ್ಟಣ್ಣ ಕಣಗಾಲ್ ಆ) ಗುರುದತ್ತ್
ಇ) ಭಾರ್ಗವ ಈ) ರವೀ (ಕೆ. ಎಸ್. ಎಲ್. ಸ್ವಾಮಿ)
9. ‘ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಷನ್’ ಯಾವ ಕ್ಷೇತ್ರದ ಪಾರಿಭಾಷಿಕ ಪದ?
ಅ) ಜೀವಶಾಸ್ತ್ರ ಆ) ಕಣ್ಣು ಪರೀಕ್ಷೆ
ಇ) ಕಂಪ್ಯೂಟರ್ ಈ) ಕಾನೂನು
10. ಸ್ವಾತಿ ತಿರುನಾಳ್ರ ಕೃತಿಗಳ ಅಂಕಿತವೇನು?
ಅ) ನಾರಾಯಣ ಆ) ಪದ್ಮನಾಭ
ಇ) ಪುರುಷೋತ್ತಮ ಈ) ಅನಂತಶಯನ
ಹಿಂದಿನ ಸಂಚಿಕೆಯ ಸರಿ ಉತ್ತರಗಳು:
1. ವಾಗ್ದೇವಿ
2. ಬಂಗಾಳಿ
3. ಶೈವಲ
4. 10ನೇ ಚಾಮರಾಜರು
5. ಮನು ಬಳಿಗಾರ್
6. ಪುರಿ
7. ತಾಪಮಾನದ ಹೆಚ್ಚಳ
8. ಸ್ವಿಟ್ಜರ್ಲೆಂಡ್
9. ಎರಡು ಸಾವಿರ ದಿನಗಳು
10. ಸಿಂಗೀತಂ ಶ್ರೀನಿವಾಸ ರಾವ್