ಬಾಗಲಕೋಟೆ:ಲೋಕಸಭಾ ಚುನಾವಣೆಗೆ ತನ್ನ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು, ಕಾಂಗ್ರೆಸ್ ಈಗ ಕಾರ್ಯಕರ್ತರ ಮೊರೆ ಹೋಗಿದೆ. ಜಿಲ್ಲೆಯ ಎಲ್ಲ ಬೂತ್ ಸಮಿತಿ ಅಧ್ಯಕ್ಷರಿಗೆ ಕಳೆದೊಂದು ವಾರದಿಂದ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಹೆಸರಿನಲ್ಲಿ ಧ್ವನಿ ಮುದ್ರಿತ ಕರೆ ಬಂದಿದ್ದು, ಅವರ ಅಭಿಪ್ರಾಯ ಸಂಗ್ರಹಿಸಲಾಗಿದೆ.