ದೆಹಲಿ ನಿವಾಸಿ ಮೇಲೆ ಹಲ್ಲೆ: ಶುಕ್ರವಾರ ಮುಜಫ್ಫರನಗರಕ್ಕೆ ಬಂದಿದ್ದ ದೆಹಲಿ ನಿವಾಸಿಯೊಬ್ಬರನ್ನು ಮಕ್ಕಳ ಕಳ್ಳ ಎಂದು ಭಾವಿಸಿ, ಆನಂದಪುರಿ ಪ್ರದೇಶದ ನಿವಾಸಿಗಳು ಥಳಿಸಿದ್ದರು. ತನಿಖೆಯಿಂದ ಈತ ನಿರಪರಾಧಿ ಎಂದು ತಿಳಿದಿದೆ. ಮತ್ತೊಂದು ಘಟನೆಯಲ್ಲಿ ಬಲಿಯಾದಲ್ಲಿ ಭಿಕ್ಷುಕಿಯೊಬ್ಬಳು ಮಗುವಿನೊಂದಿಗೆ ಇದ್ದಿದ್ದನ್ನು ಕಂಡು ಮಕ್ಕಳ ಕಳ್ಳಿ ಎಂದು ಜನರು ಹಲ್ಲೆ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಭಿಕ್ಷುಕಿಯನ್ನು ರಕ್ಷಿಸಿದ್ದಾರೆ.