ಕಳೆದ ವಾರ ಜಾರ್ಖಂಡ್ನಲ್ಲಿ 24 ವರ್ಷದ ವ್ಯಕ್ತಿ ಮೇಲೆ ಗುಂಪು ದಾಳಿ ನಡೆದಿತ್ತು. ಘಟನೆಯಲ್ಲಿ ತಬ್ರೇಜ್ ಅನ್ಸಾರಿ ಅವರನ್ನು ಕಂಬಕ್ಕೆ ಕಟ್ಟಿ ಹಾಕಿ ಗುಂಪೊಂದು ಹಲ್ಲೆಗೈದಿತ್ತು. ಯುವಕನಿಗೆ ‘ಜೈ ಶ್ರೀರಾಮ್, ಜೈ ಹನುಮಾನ್’ ಹೇಳು ಎಂದು ಹಲ್ಲೆಗೈದ ಗುಂಪು ಒತ್ತಾಯಿಸಿತ್ತು. ಕೆಲ ದಿನಗಳ ನಂತರ ಗಾಯದಿಂದ ಯುವಕ ಮೃತಪಟ್ಟಿದ್ದರು.