ಸಾರ್ವಜನಿಕ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ‘ಹರಿಯಾಣದ ರೈತರಿಗೆ ದೊರೆಯಬೇಕಾದ ನೀರು ಕಳೆದ 70 ವರ್ಷಗಳಿಂದ ಪಾಕಿಸ್ತಾನಕ್ಕೆ ಹರಿದುಹೋಗುತ್ತಿದೆ. ಆದರೆ, ಈ ಮೋದಿ ಅದನ್ನು ನಿಲ್ಲಿಸಿ ನಿಮ್ಮ ಮನೆಗೆ ಹರಿಯುವಂತೆ ಮಾಡಲಿದ್ದಾನೆ. ನಾನು ಈಗಾಗಲೇ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತನಾಗಿದ್ದೇನೆ. ಈ ನೀರು ಭಾರತ ಮತ್ತು ಹರಿಯಾಣದ ರೈತರಿಗೆ ಸೇರಿದ್ದು. ಅದಕ್ಕಾಗಿಯೇ ಮೋದಿ ನಿಮಗಾಗಿ ಈ ಹೋರಾಟ ಮಾಡುತ್ತಿದ್ದಾನೆ’ ಎಂದು ಹೇಳಿದ್ದಾರೆ.