ಕೊಚ್ಚಿ: ಮಾಜಿ ರಕ್ಷಣ ಸಚಿವ ಹಾಗೂ ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರೀಕರ್ರಫೇಲ್ ಒಪ್ಪಂದ ಪ್ರಕರಣದಲ್ಲಿನ ತಮ್ಮ ಪಾತ್ರವನ್ನು ನಿರಾಕರಿಸಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಅನಿಲ್ ಅಂಬಾನಿ ಅವರಿಗೆ ಅನುಕೂಲ ಮಾಡಿಕೊಡುವ ಹೊಸ ರಫೇಲ್ ಒಪ್ಪಂದದಲ್ಲಿಮಾಜಿ ರಕ್ಷಣ ಸಚಿವರು ತಮ್ಮ ಪಾತ್ರವೇನೂಇಲ್ಲ ಎಂದು ತಿಳಿಸಿದ್ದಾರೆ ಎಂದು ರಾಹುಲ್ ಗಾಂಧಿಸ್ಪಷ್ಟಪಡಿಸಿದ್ದಾರೆ.
ಮಂಗಳವಾರ ಗೋವಾಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ಮುಖ್ಯಮಂತ್ರಿ ಮನೋಹರ್ಪರ್ರೀಕರ್ ಅವರನ್ನು ಭೇಟಿ ಮಾಡಿದ ಕೆಲವೇ ಗಂಟೆಗಳ ಬಳಿಕ ಈ ಹೇಳಿಕೆ ನೀಡಿದ್ದಾರೆ. ಕೊಚ್ಚಿಯಲ್ಲಿ ಬೂತ್ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಕಳೆದ ಸೋಮವಾರ ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಮನೋಹರ್ ಪರ್ರೀಕರ್ ವಿರುದ್ಧ ಮಾಡಿದ್ದ ಆರೋಪಕ್ಕೆ ರಾಹುಲ್ ಯಾವುದೇ ಸ್ಪಷ್ಟನೆ ಕೊಟ್ಟಿಲ್ಲ.
‘ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದ ಆಡಿಯೊ ಟೇಪ್ ಬಹಿರಂಗವಾಗಿ ಮೂವತ್ತು ದಿನಗಳಾಗಿವೆ. ಯಾವುದೇ ಎಫ್ಐಆರ್ ದಾಖಲಾಗಿಲ್ಲ, ತನಿಖೆಗೂ ಆದೇಶಿಸಲಾಗಿಲ್ಲ. ಸಚಿವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಆಡಿಯೊ ಟೇಪ್ ಅಧಿಕೃತವೆಂಬುದು ದೃಢ. ರಫೇಲ್ನ ರಹಸ್ಯ ದಾಖಲೆಗಳು ಪರ್ರೀಕರ್ ಬಳಿ ಇದ್ದು ಅದು ಅವರಿಗೆ ಪ್ರಧಾನಿಯವರಿಗಿಂತಲೂ ಹೆಚ್ಚಿನ ಅಧಿಕಾರ ನೀಡಿದೆ’ ಎಂದು ರಾಹುಲ್ ಗಾಂಧಿ ಸೋಮವಾರ ಟ್ವೀಟ್ ಮಾಡಿದ್ದರು.
30 days since the Goa Audio Tapes on RAFALE were released. No FIR or enquiry ordered. No action against the Minister either!
— Rahul Gandhi (@RahulGandhi) January 28, 2019
It's obvious that the tapes are authentic & that Goa CM, Parrikar, is in possession of explosive RAFALE secrets, that give him power over the PM. https://t.co/sKwwfIj0bM
ಮರುದಿನವೇ ಗೋವಾಗೆ ಆಗಮಿಸಿದ್ದ ರಾಹುಲ್ ಗಾಂಧಿ ಮುಖ್ಯಮಂತ್ರಿ ಮನೋಹರ್ ಪರ್ರೀಕರ್ ಅವರನ್ನು ಭೇಟಿ ಮಾಡಿದ್ದರು. ಈ ಬಗ್ಗೆ ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ, ‘ಬೇಗನೆ ಗುಣಮುಖರಾಗುವಂತೆ ಹಾರೈಸಲು ಇವತ್ತು ಬೆಳಿಗ್ಗೆ ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರೀಕರ್ ಅವರನ್ನು ಭೇಟಿಯಾದೆ. ಇದು ಖಾಸಗಿ ಭೇಟಿ’ ಎಂದು ರಾಹುಲ್ ಗಾಂಧಿ ಟ್ವೀಟ್ ರಾಹುಲ್ ಹೇಳಿದ್ದರು.
This morning I visited Goa CM, Manohar Parrikar, to wish him a speedy recovery. It was a personal visit.
— Rahul Gandhi (@RahulGandhi) January 29, 2019
Later this afternoon I will address Polling Booth Committee Members from all over Kerala, in Kochi. The meeting will be LIVE on my Facebook page.https://t.co/NraAer1ksf
ಕೊಚ್ಚಿಯಲ್ಲಿ ರಫೇಲ್ ಒಪ್ಪಂದದ ಬಗ್ಗೆ ಮಾತನಾಡಿದ ರಾಹುಲ್ ಗಾಂಧಿ, ’ಜನರ ₹ 30 ಸಾವಿರ ಕೋಟಿ ರೂಪಾಯಿಗಳನ್ನು ತನ್ನ ಗೆಳೆಯ ಅನಿಲ್ ಅಂಬಾನಿಗೆ ನೀಡಿದ್ದಾರೆ ಎಂದು ಆರೋಪಿಸಿದರು. ₹526 ಕೋಟಿ ಮೊತ್ತದ ವಿಮಾನದ ಬೆಲೆಯನ್ನು ₹1.600 ಕೋಟಿಗೆ ಏರಿಕೆ ಮಾಡಿದ್ದು ಯಾಕೆ ?ಈ ಪ್ರಶ್ನೆಗೆ ದೇಶದ ಯುವ ಜನರು ಮತ್ತು ಕೇರಳದ ಯುವಜನತೆ ಉತ್ತರ ಕೇಳುತ್ತಿದ್ದಾರೆ? ಆ ಉತ್ತರ ಈ ದೇಶದ ಪ್ರಧಾನಿ ಭ್ರಷ್ಟ ಎಂದು ರಾಹುಲ್ ಹೇಳಿದರು.
ಪ್ರಧಾನಿ ತಮ್ಮ ರಕ್ಷಣೆಗಾಗಿ ಸಿಬಿಐ ನಿರ್ದೇಶಕರನ್ನು ವಜಾ ಮಾಡುತ್ತಾರೆ ಎಂದು ರಾಹುಲ್ ಆರೋಪಿಸಿದರು. ರಫೇಲ್ ಒಪ್ಪಂದದ ಗುತ್ತಿಗೆಯನ್ನು ಅನಿಲ್ ಅಂಬಾನಿಗೆ ನೀಡುವಂತೆ ಫ್ರಾನ್ಸ್ ಮಾಜಿ ಅಧ್ಯಕ್ಷರು ಮಾಧ್ಯಮಗಳಿಗೆ ಸ್ಪಷ್ಟವಾಗಿ ಹೇಳಿದ್ದಾರೆ. ಯುದ್ಧ ವಿಮಾನ ತಯಾರಿಕೆಯಲ್ಲಿ 70 ವರ್ಷ ಅನುಭವ ಇರುವ ಎಚ್ಎಎಲ್ಗೆ ನೀಡದೇ ಇದರ ಬಗ್ಗೆ ಯಾವುದೇ ಅನುಭವ ಹೊಂದಿರದ ಅನಿಲ್ ಅಂಬಾನಿ ಕಂಪೆನಿಗೆ ನೀಡಿದ್ದು ಯಾಕೆ ಎಂದು ರಾಹುಲ್ ಪ್ರಶ್ನೆ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.