‘ರಾಮ ಜನ್ಮಭೂಮಿಯಾದ ಪವಿತ್ರ ಅಯೋಧ್ಯೆಗೆ ಲೈಂಗಿಕ ಕಾರ್ಯಕರ್ತೆಯರನ್ನು ಆಹ್ವಾನಿಸುವ ಮೂಲಕ ಈ ಧರ್ಮಕ್ಷೇತ್ರವನ್ನು ಬಾಪು ಅಪವಿತ್ರಗೊಳಿಸಿದ್ದಾರೆ. ಮೊರಾರಿ ಬಾಪು ಅವರಿಗೆ ಸಮಾಜವನ್ನು ಸುಧಾರಿಸಬೇಕೆಂಬ ಬಯಕೆ ಇದ್ದಿದ್ದೇ ಆದರೆ, ರಾಮಕಥಾ ಕಾರ್ಯಕ್ರಮಗಳನ್ನು ನಕ್ಸಲ್ಪೀಡಿತ ಪ್ರದೇಶ ಅಥವಾ ಕಾಮಾಟಿಪುರದಲ್ಲಿ ಏರ್ಪಡಿಸಲಿ’ ಎಂದು ಧರ್ಮಸೇನಾ ಮುಖ್ಯಸ್ಥ, ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಪ್ರಮುಖ ಆರೋಪಿ ಸಂತೋಷ್ ದುಬೆ ಹೇಳಿದ್ದಾರೆ.