ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐವರನ್ನು ರಕ್ಷಿಸಿ ನೀರುಪಾಲಾದ ಪ್ರವಾಸಿ ಮಾರ್ಗದರ್ಶಿ

Last Updated 1 ಜೂನ್ 2019, 19:22 IST
ಅಕ್ಷರ ಗಾತ್ರ

ಶ್ರೀನಗರ: ಪಹಲ್ಗಾಂ ಬಳಿಯ ಲಿಡ್ಡರ್‌ ನದಿಯಲ್ಲಿ ರ್‍ಯಾಫ್ಟ್ ಮಗುಚಿ ನೀರು ಪಾಲಾಗುತ್ತಿದ್ದ ಐವರನ್ನು ರಕ್ಷಿಸಿದ ಬಳಿಕ ಪ್ರವಾಸಿ ಮಾರ್ಗದರ್ಶಿಯೊಬ್ಬರು ಮುಳುಗಿ ಮೃತಪಟ್ಟಿದ್ದಾರೆ.

ರೌಫ್‌ ಅಹಮ್ಮದ್‌ ದಾರ್‌ ಮೃತಪಟ್ಟವರು. ಪಶ್ಚಿಮ ಬಂಗಾಳದ ಪ್ರವಾಸಿ ದಂಪತಿ ಸೇರಿದಂತೆ ಐವರು ಹಾಗೂ ರೌಫ್‌ ರ್‍ಯಾಫ್ಟ್‌ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಗಾಳಿಗೆ ಸಿಲುಕಿ ರ್‍ಯಾಫ್ಟ್‌ ತಲೆಕೆಳಗಾಗಿ ಮಗುಚಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೂಡಲೇ ರೌಫ್‌ ನದಿಗೆ ಧುಮುಕಿ ಮುಳುಗುತ್ತಿದ್ದವರನ್ನು ರಕ್ಷಿಸಿದ್ದಾರೆ. ಆದರೆ ಅವರಿಗೆ ಮೇಲೆ ಬರಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.

ಐದು ಲಕ್ಷ ಪರಿಹಾರ: ರೌಫ್‌ ಅವರ ಕುಟುಂಬಕ್ಕೆ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್‌ ಮಲಿಕ್‌ ಅವರು ₹ 5 ಲಕ್ಷ ಪರಿಹಾರ ಘೋಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT