ಶ್ರೀನಗರ: ಪಹಲ್ಗಾಂ ಬಳಿಯ ಲಿಡ್ಡರ್ ನದಿಯಲ್ಲಿ ರ್ಯಾಫ್ಟ್ ಮಗುಚಿ ನೀರು ಪಾಲಾಗುತ್ತಿದ್ದ ಐವರನ್ನು ರಕ್ಷಿಸಿದ ಬಳಿಕ ಪ್ರವಾಸಿ ಮಾರ್ಗದರ್ಶಿಯೊಬ್ಬರು ಮುಳುಗಿ ಮೃತಪಟ್ಟಿದ್ದಾರೆ.
ರೌಫ್ ಅಹಮ್ಮದ್ ದಾರ್ ಮೃತಪಟ್ಟವರು. ಪಶ್ಚಿಮ ಬಂಗಾಳದ ಪ್ರವಾಸಿ ದಂಪತಿ ಸೇರಿದಂತೆ ಐವರು ಹಾಗೂ ರೌಫ್ ರ್ಯಾಫ್ಟ್ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಗಾಳಿಗೆ ಸಿಲುಕಿ ರ್ಯಾಫ್ಟ್ ತಲೆಕೆಳಗಾಗಿ ಮಗುಚಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೂಡಲೇ ರೌಫ್ ನದಿಗೆ ಧುಮುಕಿ ಮುಳುಗುತ್ತಿದ್ದವರನ್ನು ರಕ್ಷಿಸಿದ್ದಾರೆ. ಆದರೆ ಅವರಿಗೆ ಮೇಲೆ ಬರಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.
ಐದು ಲಕ್ಷ ಪರಿಹಾರ: ರೌಫ್ ಅವರ ಕುಟುಂಬಕ್ಕೆ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ₹ 5 ಲಕ್ಷ ಪರಿಹಾರ ಘೋಷಿಸಿದ್ದಾರೆ.