<p><strong>ಶ್ರೀನಗರ : </strong>‘ಅಮಾನತುಗೊಂಡಿರುವ ಜಮ್ಮು ಮತ್ತು ಕಾಶ್ಮೀರದ ಡಿವೈಎಸ್ಪಿ ದೇವಿಂದರ್ ಸಿಂಗ್, ಕಳೆದ ವರ್ಷವೂ ಹಿಜ್ಬುಲ್ ಮುಜಾದ್ದೀನ್ ಸಂಘಟನೆಯ ಉಗ್ರ ನವೀದ್ ಬಾಬುಗೆ ಜಮ್ಮುವಿನಲ್ಲಿ ವಿರಾಮ ಮತ್ತು ಚೇತರಿಕೆಗೆ ಅವಕಾಶ ಮಾಡಿಕೊಟ್ಟು, ನಂತರ ಶೋಫಿಯಾನ್ಗೆ ಮರಳಲು ಅವಕಾಶ ಕಲ್ಪಿಸಿದ್ದ’ಎಂದು ತನಿಖಾಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.</p>.<p>‘ಆಗ ಏನ್ ಮಾಡಿದ್ದೆನೋ ಏನೋ, ನನ್ನ ತಲೆ ಬುದ್ಧಿ ಕೆಟ್ಟುಹೋಗಿತ್ತು’ ಎಂದು ದೇವಿಂದರ್ ಸಿಂಗ್ ತನಿಖೆ ವೇಳೆ ಅಧಿಕಾರಿಗಳ ಮುಂದೆ ಹೇಳಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.</p>.<p>ಉಗ್ರರಾದ ನವೀದ್ ಬಾಬು ಅಲಿಯಾಸ್ ಬಾಬರ್ ಅಜಂ ಮತ್ತು ಆತನ ಸಹಚರ ಆಸಿಫ್ ಅಹ್ಮದ್ ಜೊತೆ ಶನಿವಾರ ಡಿವೈಎಸ್ಪಿ ದೇವಿಂದರ್ ಸಿಂಗ್ನನ್ನು ಬಂಧಿಸಲಾಗಿತ್ತು.ಉಗ್ರರಿಬ್ಬರಿಗೆ ಚಂಡೀಗಡದಲ್ಲಿ ಕೆಲ ತಿಂಗಳುಗಳ ಕಾಲ ವಸತಿ ಕಲ್ಪಿಸಲು ದೇವಿಂದರ್ ಸಿಂಗ್ ₹ 12 ಲಕ್ಷ ಪಡೆದಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>‘2019ರಲ್ಲೂ ಉಗ್ರರಿಬ್ಬರನ್ನು ದೇವಿಂದರ್ ಜಮ್ಮುವಿಗೆ ಕರೆದೊಯ್ದಿದ್ದ. ಜಮ್ಮು ಮತ್ತು ಕಾಶ್ಮೀರದ ಪೊಲೀಸರ ಕಣ್ತಪ್ಪಿಸಲು ಗುಡ್ಡಗಾಡು ಪ್ರದೇಶದಲ್ಲಿ ವಸತಿ ಕಲ್ಪಿಸಲಾಗಿತ್ತು. ಉಗ್ರ ನವೀದ್ ಕೂಡಾ ಇದೇ ರೀತಿ ಹೇಳಿದ್ದಾನೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.</p>.<p>ಡಿವೈಎಸ್ಪಿಯ ಬ್ಯಾಂಕ್ ಅಕೌಂಟ್ ಮತ್ತು ಇತರ ಆಸ್ತಿಯನ್ನು ಪೊಲೀಸರು ಪರಿಶೀಲಿಸುತ್ತಿದ್ದು, ಕಾಗದ ಪತ್ರಗಳನ್ನು ಸಂಗ್ರಹಿಸಲಾಗುತ್ತಿದೆ. ಈ ನಡುವೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸುವ ಸಾಧ್ಯತೆ ಇದೆ ಎನ್ನಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀನಗರ : </strong>‘ಅಮಾನತುಗೊಂಡಿರುವ ಜಮ್ಮು ಮತ್ತು ಕಾಶ್ಮೀರದ ಡಿವೈಎಸ್ಪಿ ದೇವಿಂದರ್ ಸಿಂಗ್, ಕಳೆದ ವರ್ಷವೂ ಹಿಜ್ಬುಲ್ ಮುಜಾದ್ದೀನ್ ಸಂಘಟನೆಯ ಉಗ್ರ ನವೀದ್ ಬಾಬುಗೆ ಜಮ್ಮುವಿನಲ್ಲಿ ವಿರಾಮ ಮತ್ತು ಚೇತರಿಕೆಗೆ ಅವಕಾಶ ಮಾಡಿಕೊಟ್ಟು, ನಂತರ ಶೋಫಿಯಾನ್ಗೆ ಮರಳಲು ಅವಕಾಶ ಕಲ್ಪಿಸಿದ್ದ’ಎಂದು ತನಿಖಾಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.</p>.<p>‘ಆಗ ಏನ್ ಮಾಡಿದ್ದೆನೋ ಏನೋ, ನನ್ನ ತಲೆ ಬುದ್ಧಿ ಕೆಟ್ಟುಹೋಗಿತ್ತು’ ಎಂದು ದೇವಿಂದರ್ ಸಿಂಗ್ ತನಿಖೆ ವೇಳೆ ಅಧಿಕಾರಿಗಳ ಮುಂದೆ ಹೇಳಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.</p>.<p>ಉಗ್ರರಾದ ನವೀದ್ ಬಾಬು ಅಲಿಯಾಸ್ ಬಾಬರ್ ಅಜಂ ಮತ್ತು ಆತನ ಸಹಚರ ಆಸಿಫ್ ಅಹ್ಮದ್ ಜೊತೆ ಶನಿವಾರ ಡಿವೈಎಸ್ಪಿ ದೇವಿಂದರ್ ಸಿಂಗ್ನನ್ನು ಬಂಧಿಸಲಾಗಿತ್ತು.ಉಗ್ರರಿಬ್ಬರಿಗೆ ಚಂಡೀಗಡದಲ್ಲಿ ಕೆಲ ತಿಂಗಳುಗಳ ಕಾಲ ವಸತಿ ಕಲ್ಪಿಸಲು ದೇವಿಂದರ್ ಸಿಂಗ್ ₹ 12 ಲಕ್ಷ ಪಡೆದಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>‘2019ರಲ್ಲೂ ಉಗ್ರರಿಬ್ಬರನ್ನು ದೇವಿಂದರ್ ಜಮ್ಮುವಿಗೆ ಕರೆದೊಯ್ದಿದ್ದ. ಜಮ್ಮು ಮತ್ತು ಕಾಶ್ಮೀರದ ಪೊಲೀಸರ ಕಣ್ತಪ್ಪಿಸಲು ಗುಡ್ಡಗಾಡು ಪ್ರದೇಶದಲ್ಲಿ ವಸತಿ ಕಲ್ಪಿಸಲಾಗಿತ್ತು. ಉಗ್ರ ನವೀದ್ ಕೂಡಾ ಇದೇ ರೀತಿ ಹೇಳಿದ್ದಾನೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.</p>.<p>ಡಿವೈಎಸ್ಪಿಯ ಬ್ಯಾಂಕ್ ಅಕೌಂಟ್ ಮತ್ತು ಇತರ ಆಸ್ತಿಯನ್ನು ಪೊಲೀಸರು ಪರಿಶೀಲಿಸುತ್ತಿದ್ದು, ಕಾಗದ ಪತ್ರಗಳನ್ನು ಸಂಗ್ರಹಿಸಲಾಗುತ್ತಿದೆ. ಈ ನಡುವೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸುವ ಸಾಧ್ಯತೆ ಇದೆ ಎನ್ನಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>