ಶ್ರೀನಗರ : ‘ಅಮಾನತುಗೊಂಡಿರುವ ಜಮ್ಮು ಮತ್ತು ಕಾಶ್ಮೀರದ ಡಿವೈಎಸ್ಪಿ ದೇವಿಂದರ್ ಸಿಂಗ್, ಕಳೆದ ವರ್ಷವೂ ಹಿಜ್ಬುಲ್ ಮುಜಾದ್ದೀನ್ ಸಂಘಟನೆಯ ಉಗ್ರ ನವೀದ್ ಬಾಬುಗೆ ಜಮ್ಮುವಿನಲ್ಲಿ ವಿರಾಮ ಮತ್ತು ಚೇತರಿಕೆಗೆ ಅವಕಾಶ ಮಾಡಿಕೊಟ್ಟು, ನಂತರ ಶೋಫಿಯಾನ್ಗೆ ಮರಳಲು ಅವಕಾಶ ಕಲ್ಪಿಸಿದ್ದ’ಎಂದು ತನಿಖಾಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.