‘ಮಂಗಳವಾರ ವಿಜಯದಶಮಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ ಕುಟುಂಬದವರು ಕಾಣಿಸದೆ ಇದ್ದಾಗ, ಸ್ಥಳೀಯರು ಅವರ ಮನೆಗೆ ತೆರಳಿದ್ದಾರೆ. ಮನೆ ಒಳಗಿನಿಂದ ಚಿಲಕ ಹಾಕಿದೆ ಎಂದು ತಿಳಿದ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಾಗಿಲು ಒಡೆದು ನೋಡಿದಾಗ ಮೂವರೂ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ’ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.