ಶೃಂಗೇರಿಯ ಶಾಸಕ ಟಿ.ಡಿ.ರಾಜೇಗೌಡ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಅವರು, ‘ಈ ಹಿಂದೆ 1964ರ ಭೂಕಂದಾಯ ಕಾಯ್ದೆಯ ಕಲಂ 94 ಎಗೆ ತಿದ್ದುಪಡಿ ತರಲಾಗಿತ್ತು. ಬಗರ್ಹುಕುಂ ಅನಧಿಕೃತ ಸಾಗುವಳಿಯನ್ನು ಸಕ್ರಮಗೊಳಿಸಲು 2005ರ ಜನವರಿ 1ರ ಗಡುವು ನಿಗದಿಪಡಿಸಲಾಗಿತ್ತು. ಈಗ 1966ರ ಭೂಕಂದಾಯ ನಿಯಮಕ್ಕೆ 108ಸಿಸಿಸಿ ಸೇರ್ಪಡೆಗೊಳಿಸಿ ಅರ್ಜಿ ನಮೂನೆ 57 ಜಾರಿಗೆ ತರುವ ಸಲುವಾಗಿ ಕಾಯ್ದೆಗೆ ತಿದ್ದುಪಡಿ ತರುವ ಪ್ರಕ್ರಿಯೆ ಜಾರಿಯಲ್ಲಿದೆ’ ಎಂದು ಅವರು ತಿಳಿಸಿದರು.