ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧ ಅಭ್ಯರ್ಥಿಗಳಿಂದ ಪ್ರಚಾರ ಭರಾಟೆ

ಬಿಜೆಪಿ ಪರ ಪ್ರಚಾರಕ್ಕೆ ಬಂದ ಶ್ರೀರಾಮುಲು
Last Updated 5 ಮೇ 2018, 10:01 IST
ಅಕ್ಷರ ಗಾತ್ರ

ಚಾಮರಾಜನಗರ: ಹರದನಹಳ್ಳಿಯಲ್ಲಿ ಸಾಮಾನ್ಯ ಜನತಾ ಪಕ್ಷ (ಎಸ್‍ಜೆಪಿ) ಅಭ್ಯರ್ಥಿ ಜೆ.ನಾರಾಯಣಸ್ವಾಮಿ ಮತಯಾಚನೆ ಶುಕ್ರವಾರ ಮತಯಾಚನೆ ಮಾಡಿದರು.

ಅವರು ತಮ್ಮ ಬೆಂಬಲಿಗರ ಜತೆಯಲ್ಲಿ ಸ್ವಗ್ರಾಮವಾದ ಹರದನಹಳ್ಳಿಯಲ್ಲಿ ಪಾದಯಾತ್ರೆ ಮೂಲಕ ಮನೆಮನೆಗೆ ತೆರಳಿ ಮತಯಾಚಿಸಿದರು.

ಗ್ರಾಮದ ಮನೆಮನೆಗೆ ತೆರಳಿ ಮತಯಾಚಿಸಿ ಮಾತನಾಡಿದ ಅಭ್ಯರ್ಥಿ ಜೆ,ನಾರಾಯಣಸ್ವಾಮಿ ‘ಚಾಮರಾಜ ನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್‍ನಿಂದ ಯಾವುದೇ ಅಭಿವೃದ್ದಿಯಾಗಿಲ್ಲ. ಕ್ಷೇತ್ರದ ಅಭಿವೃದ್ದಿಗಾಗಿ ಹೊಸದಾಗಿ ಉದಯವಾಗಿರುವ ಸಾಮಾನ್ಯ ಜನತಾ ಪಕ್ಷದ ಅಭ್ಯರ್ಥಿಯಾದ ನನಗೆ ಈ ಬಾರಿ ಮತ ಹಾಕಿಸಿ ಜಯಶೀಲರನ್ನಾಗಿ ತಮ್ಮ ಸೇವೆ ಮಾಡುವ ಅವಕಾಶ ಕಲ್ಪಿಸಿಕೊಡಬೇಕು’ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಮೊಹಮ್ಮದ್‍ ಹನೀಫ್, ಪ್ರಧಾನ ಕಾರ್ಯದರ್ಶಿ ಮುನಾವರ್‌ಪಾಷಾ, ರೈತಮೋರ್ಚಾದ ಸೋಮಶೇಖರ್, ಕಾರ್ಯದರ್ಶಿ ಬಸಪ್ಪ, ಯುವ ಮೋರ್ಚಾದ ಅಧ್ಯಕ್ಷ ಅರುಣ್‍ಕುಮಾರ್, ಉಪಾಧ್ಯಕ್ಷ ಬಿ.ಸಂತೋಷ್, ಅಲ್ಪಸಂಖ್ಯಾತರ ಘಟಕದ ಇಮ್ತಿಯಾಜ್ ಪವನ್‍ಕುಮಾರ್ ಇತರರು ಹಾಜರಿದ್ದರು.

ಮಲ್ಲಿಕಾರ್ಜುನಪ್ಪ ಪರ ಹನುಮಂತಶೆಟ್ಟಿ ಪ್ರಚಾರ: ‘ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ ಅವರನ್ನು ಬೆಂಬಲಿಸಬೇಕು’ ಎಂದು ಮುಖಂಡ ಹನುಮಂತ ಶೆಟ್ಟಿ ಮನವಿ ಮಾಡಿದರು.

ಅವರು ಶುಕ್ರವಾರ ನಾಗವಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ನಾಗವಳ್ಳಿ, ಕೊಕ್ಕನಹಳ್ಳಿ, ಪುಟ್ಟನಪುರ, ಮಲ್ಲದೇವನಹಳ್ಳಿ ನಲ್ಲೂರು, ಜೋತಿಗೌಡನಪುರ ಮತ್ತು ಗ್ರಾ.ಪಂ.ವ್ಯಾಪ್ತಿಯ ಗ್ರಾಮಗಳು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ಪ್ರೊ.ಮಲ್ಲಿಕಾರ್ಜುನಪ್ಪ ಅವರ ಜೊತೆ ಗ್ರಾಮಗಳಲ್ಲಿ ರೋಡ್ ಷೋ ನಡೆಸಿ ಬಿರುಸಿ ಪ್ರಚಾರ ನಡೆಸಿ ಮಾತನಾಡಿದರು.

‘ಶಾಸಕ ಪುಟ್ಟರಂಗಶೆಟ್ಟಿ ಮುಗ್ದ ಜನರಾದ ಉಪ್ಪಾರ ಜನಾಂಗವನ್ನು ಬಳಸಿಕೊಂಡು ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿ ಉಪ್ಪಾರ ಜನಾಂಗದ ಅಭಿವೃದ್ದಿಗೆ ಯಾವುದೇ ಕೆಲಸ ಮಾಡಿಲ್ಲ. ಇನ್ನು ಚಾಮರಾಜನಗರ ವಿಧಾನಸಭಾ ಕ್ಷೇತ್ರ ಅಭಿವೃದ್ದಿಗೂ ಸಹ ಶ್ರಮಿಸಿಲ್ಲ. ಇದಕ್ಕೆ ತಾಜಾ ಉದಾಹರಣೆ ಚಾಮರಾಜನಗರ ಜಿಲ್ಲಾ ಕೇಂದ್ರವನ್ನೇ ನೋಡಿದರೆ ಸಾಕು. ಚಾಮರಾಜನಗರದಲ್ಲಿ ಒಂದೆರೆಡು ರಸ್ತೆಗಳನ್ನು ಮಾಡಲು 10 ವರ್ಷಗಳಾದರೂ ಸಾಕಾಗಲಿಲ್ಲವೇ’ ಎಂದು ಪ್ರಶ್ನಿಸಿದರು.

ಚಾಮರಾಜನಗರದ ಜನತೆಗೆ ಮತ್ತು ಪ್ರತಿನಿತ್ಯ ಚಾಮರಾಜನಗರಕ್ಕೆ ಬರುವ ಪ್ರವಾಸಿಗರು ಮತ್ತು ಸಾರ್ವಜನಿಕರಿಗೆ ದೂಳು ಭಾಗ್ಯ ನೀಡಿರುವುದೇ ಇವರ ಸಾಧನೆ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ವಿರುದ್ದ ಹರಿಹಾಯ್ದರು. ಇದೇ ಸಂದರ್ಭದಲ್ಲಿ ನಾಗವಳ್ಳಿ ಗ್ರಾಮದ ವಿವಿಧ ಮುಖಂಡರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಮಹದೇವಯ್ಯ, ಬಿಜೆಪಿ ಅಭ್ಯರ್ಥಿ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಅಯ್ಯನಪುರ ಶಿವಕುಮಾರ್, ತಾ.ಪಂ.ಮಾಜಿ ಸದಸ್ಯ ಕಾಗಲವಾಡಿ ಶಿವಸ್ವಾಮಿ, ತಾ.ಪಂ.ಉಪಾಧ್ಯಕ್ಷ ಧಯಾನಿಧಿ,  ಮುಖಂಡರಾದ ಮಂಗಲಶಿವಕುಮಾರ್, ಕೆಲ್ಲಂಬಳ್ಳಿ ಸೋಮನಾಯಕ, ಕಂಡಕ್ಟರ್ ಸೋಮನಾಯಕ, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಕೆ.ಎಸ್,ನಾಗರಾಜಪ್ಪ, ನಲ್ಲೂರು ಬಸವಣ್ಣ ಇದ್ದರು.

ವಿವಿಧ ವಾರ್ಡ್‌ಗಳಲ್ಲಿ ಪುಟ್ಟರಂಗಶೆಟ್ಟಿ ಮತಯಾಚನೆ: ಕಾಂಗ್ರಸ್ ಅಭ್ಯರ್ಥಿ ಸಿ.ಪುಟ್ಟರಂಗಶೆಟ್ಟಿ ಅವರು ಶುಕ್ರವಾರ ಪಟ್ಟಣದ ಮೇಗಲ ಉಪ್ಪಾರ ಹಾಗೂ ನಾಯಕರ ಬಡಾವಣೆ ಹೌಸಿಂಗ್ ಬೋರ್ಡ್‌, ಕರಿನಂಜನಪುರ ಸೇರಿದಂತೆ ವಿವಿಧ ವಾರ್ಡ್‍ಗಳಿಗೆ ಕಾರ್ಯಕರ್ತರು ಹಾಗೂ ಮುಖಂಡರ ಜೊತೆಗೆ ಮನೆಮನೆಗೆ ತೆರಳಿ ಬಿರುಸಿನ ಮತಯಾಚಿಸಿದರು. ವಾರ್ಡ್‍ಗಳಿಗೆ ಮತಯಾಚಿಸಲು ಬಂದ ಶಾಸಕರಿಗೆ ಹೂವಿನ ಹಾರ ಹಾಕಿ ಮತದಾರರು ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪುಟ್ಟರಂಗಶೆಟ್ಟಿ, ‘10 ವರ್ಷಗಳ ಶಾಸಕತ್ವದ ಅವಧಿಯಲ್ಲಿ ಯಾವುದೇ ಭೇದಭಾವ ಇಲ್ಲದೇ ಸಮಾನತೆಯಿಂದ ಪಟ್ಟಣದ ಎಲ್ಲಾ ವಾರ್ಡ್‍ಗಳಲ್ಲೂ ಕೆಲಸ ಮಾಡಿದ್ದೇನೆ. ಈ ಬಾರಿಯೂ ಆಶೀರ್ವದಿಸಬೇಕು ಎಂದು ಕೋರಿದರು.

ಗೋಪಾಲ್ ಮಂಜು ರಘು ಕೃಷ್ಣ ನಾಗಶೆಟ್ಟಿ ಮಸಣ್ಣ ಶೆಟ್ಟಿ ಜಿಲ್ಲಾ ಮಹಿಳಾ ಕಾಂಗ್ರಸ್ ಅಧ್ಯಕ್ಷೆ ಲತಾಜಯಣ್ಣ ಬ್ಲಾಕ್ ಅಧ್ಯಕ್ಷ ಮಹಮದ್ ಅಜ್ಗರ್ ಮುನ್ನಾ, ನಗರಸಭಾ ಅಧ್ಯಕ್ಷೆ ಶೋಭಾ ಪುಟ್ಟಸ್ವಾಮಿ ಉಪಾಧ್ಯಕ್ಷ ರಾಜಪ್ಪ ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷ ಉಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT