ಮಂಡ್ಯ: ಕಾಂಗ್ರೆಸ್ನಲ್ಲಿ ಕೊನೆಯ ದಿನದವರೆಗೆ ಗೊಂದಲದ ಗೂಡಾಗಿದ್ದ ಮಂಡ್ಯ ಕ್ಷೇತ್ರದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ವಿಚಾರಕ್ಕೆ ಪಕ್ಷದ ಹೈಕಮಾಂಡ್ ಮಂಗಳವಾರ ಮಧ್ಯಾಹ್ನದ ವೇಳೆಗೆ ತೆರೆ ಎಳೆದಿದ್ದು, ಗಣಿಗ ಪಿ. ರವಿಕುಮಾರ್ ಅವರಿಗೆ ಟಿಕೆಟ್ ನೀಡಿದೆ.
ಮಂಡ್ಯದಿಂದ ಮಾಜಿ ಸಚಿವ ಅಂಬರೀಷ್ ಅವರಿಗೆ ಟಿಕೆಟ್ ನೀಡಿದ್ದರೂ ಅವರು ಕಣಕ್ಕಿಳಿಯದ ಕಾರಣ ಅಭ್ಯರ್ಥಿಯನ್ನು ಬದಲಿಸಿರುವ ಕಾಂಗ್ರೆಸ್ ಹೈಕಮಾಂಡ್, ಗಣಿಗ ಪಿ. ರವಿಕುಮಾರ್ ಗೌಡ ಅವರಿಗೆ ‘ಬಿ’ ಫಾರಂ ವಿತರಿಸಿದೆ.
ಕಣಕ್ಕಿಳಿಯದೆ ‘ಕೈ’ಕೊಟ್ಟ ಅಂಬರೀಷ್ ವಿರುದ್ಧ ಕಾಂಗ್ರೆಸ್ ವರಿಷ್ಠರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ.