‘ಮುದನೂರಿನ ತೆರೆದಬಾವಿಯಿಂದ ತೆಗ್ಗಳ್ಳಿ ಹಾಗೂ ಶಾಖಾಪುರಕ್ಕೆ ಕುಡಿಯುವ ನೀರು ಪೂರೈಸಲಾಗುತ್ತದೆ. ಈ ಬಾವಿ ಪಕ್ಕ ನೀರು ಶುದ್ಧೀಕರಣ ಘಟಕವಿದ್ದು, ಅದು ಕೆಟ್ಟಿದೆ. ಮುದನೂರಿನ ಕೆಲವರು ನಿತ್ಯ ಇಲ್ಲಿಗೆ ಬಂದು ಇಸ್ಪೀಟ್ ಆಡುವುದು, ಗಲೀಜು ಮಾಡುವುದು ನಡೆದೇ ಇತ್ತು. ಪಂಪ್ ಆಪರೇಟರ್ ಮೌನೇಶ ಜೂಜುಕೋರರಿಗೆ ಅಲ್ಲಿ ಗಲೀಜು ಮಾಡದಂತೆ ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಇದೇ ಕಾರಣಕ್ಕಾಗಿ ಮೌನೇಶ ಜೂಜುಕೋರರೊಂದಿಗೆ ಜಗಳವಾಡಿದ್ದ. ಇದೇ ದ್ವೇಷದಿಂದ ಈ ಕೃತ್ಯವನ್ನು ಎಸಗಿರಬಹುದು’ ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸುತ್ತಿದ್ದಾರೆ. ಈಗ ಇದೇ ಜಾಡಿನಲ್ಲಿ ತನಿಖೆ ಸಾಗಿದೆ.