ಬೆಂಗಳೂರು: ಬಡ್ತಿ ಮೀಸಲಾತಿ ವ್ಯಾಜ್ಯ ಇನ್ನೂ ಸುಪ್ರೀಂ ಕೋರ್ಟ್ನಲ್ಲಿರುವುದರಿಂದ, ಈ ಮಧ್ಯೆ ನಿವೃತ್ತಿಯಾದ ನೌಕರರಿಗೆ ಹಿಂಬಡ್ತಿ ಹೊಂದುವ ಹುದ್ದೆಗೆ ಅರ್ಹವೇತನವನ್ನು ಕಾಲ್ಪನಿಕವಾಗಿ ಪರಿಗಣಿಸಿ ನಿವೃತ್ತಿ ವೇತನ, ಗಳಿಕೆ ರಜೆ ನಗದೀಕರಣ ಮತ್ತಿತರ ಪಿಂಚಣಿ ಸೌಲಭ್ಯಗಳನ್ನು ಇತ್ಯರ್ಥಪಡಿಸುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ಆದೇಶ ಹೊರಡಿಸಿದೆ.