ಕೇಂದ್ರ ಸರ್ಕಾರ ನೀಡಿರುವ ₹669 ಕೋಟಿ ಹೆಚ್ಚುವರಿ ಪರಿಹಾರ, ‘ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ. ‘ಸುಳ್ಳು ದೇವರ ಭಕ್ತರಾದ ಬಿಜೆಪಿ ನಾಯಕರು, ಪರಿಹಾರದ ಮೊತ್ತ ₹1,200 ಕೋಟಿ ಹಾಗೂ ₹1,869 ಕೋಟಿ ಸೇರಿ ₹3,069 ಕೋಟಿ ಎಂದು ಹೇಳಿಕೊಂಡು ಸಂಭ್ರಮಿಸುತ್ತಿರುವುದು ತಮಾಷೆಯಾಗಿದೆ’ ಎಂದು ಕುಟುಕಿದ್ದಾರೆ.