ಬೆಂಗಳೂರು: ನೆರೆ ಮತ್ತು ಬರ ಪರಿಹಾರ ರೂಪದಲ್ಲಿ ರೈತರಿಗೆ ನೀಡಿದ ಹಣದಲ್ಲೇ ರೈತರ ಸಾಲಕ್ಕೆ ಮುರಿದುಕೊಳ್ಳಲು ಹೊರಟಿರುವ ವಾಣಿಜ್ಯ ಮತ್ತು ಸಹಕಾರಿ ಬ್ಯಾಂಕ್ಗಳಿಗೆ ನೋಟಿಸ್ ನೀಡಲು ಸರ್ಕಾರ ನಿರ್ಧರಿಸಿದೆ. ‘ಕೇಂದ್ರದಿಂದ ಪಡೆದಿರುವ ₹1,200 ಕೋಟಿಯನ್ನು ರೈತರ ಬೆಳೆ ನಾಶಕ್ಕೆ ಪರಿಹಾರ ರೂಪದಲ್ಲಿ ನೀಡಲಾಗುತ್ತಿದೆ. ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೇ ವರ್ಗಾಯಿಸಲಾಗುತ್ತಿದೆ’ ಎಂದು ಸಚಿವ ಆರ್.ಅಶೋಕ ಇಲ್ಲಿ ತಿಳಿಸಿದರು.