‘ಎರಡೆರಡು ಕಡೆ ಸ್ಪರ್ಧೆಯಿಂದ ಹಣ, ಸಮಯ ಎರಡೂ ಪೋಲು. ಹೀಗಾಗಿ, ರಾಮನಗರದಲ್ಲಿ ಸಾಮಾನ್ಯ ಕಾರ್ಯಕರ್ತನೊಬ್ಬನನ್ನು ಸ್ಪರ್ಧೆಗೆ ನಿಲ್ಲಿಸಿ, ಚನ್ನಪಟ್ಟಣದಿಂದ ಮಾತ್ರ ಅವರು ಕಣಕ್ಕೆ ಇಳಿಯಲಿ. ನಾನೂ ಅದನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸಿ ಗೆದ್ದು ತೋರಿಸುತ್ತೇನೆ. ಇಲ್ಲವೇ ಅವರಿಗೆ ತಾಕತ್ತಿದ್ದಲ್ಲಿ ಕನಕಪುರಕ್ಕೆ ಹೋಗಿ ನಿಲ್ಲಲಿ’ ಎಂದು ಸವಾಲು ಹಾಕಿದರು.‘ಚನ್ನಪಟ್ಟಣದಲ್ಲಿಯೂ ನಾಲ್ಕೈದು ಮಂದಿ ಹೆಸರಲ್ಲಿ ಅವರು ಬೇನಾಮಿ ಆಸ್ತಿ ಹೊಂದಿದ್ದಾರೆ. ಮಲೇಷ್ಯಾ, ಸಿಂಗಪುರದಲ್ಲಿಯೂ ಆಸ್ತಿ ಮಾಡಿಕೊಂಡಿದ್ದಾರೆ’ ಎಂದು ಆರೋಪಿಸಿದರು.