ಕುವೆಂಪು ರಚಿಸಿದ ನಾಡಗೀತೆಗೆ ನಿರ್ದಿಷ್ಟ ದಾಟಿ ಗುರುತಿಸುವಂತೆ ಒಂದೂವರೆ ದಶಕದಿಂದ ಸರ್ಕಾರಕ್ಕೆ ಒತ್ತಡ ಹೇರಲಾಗುತ್ತಿದೆ. 5 ರಿಂದ 6 ನಿಮಿಷ ಕಾಲಾವಕಾಶ ತೆಗೆದುಕೊಳ್ಳುವ ನಾಡಗೀತೆಗೆ ವೃದ್ಧರು, ಗರ್ಭಿಣಿಯರು ಎದ್ದು ನಿಂತು ಗೌರವ ಸೂಚಿಸಲು ಸಾಧ್ಯವಾಗುತ್ತಿಲ್ಲ. ಇದರ ಕಾಲಾವಧಿಯನ್ನು ಕಡಿಮೆ ಮಾಡುವಂತೆ 2013ರಲ್ಲಿ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ಸಮಿತಿಯ ಶಿಫಾರಸು ಅನುಷ್ಠಾನಕ್ಕೆ ಸರ್ಕಾರ ಮುಂದಾಗುತ್ತಿಲ್ಲ ಎಂಬ ಅಸಮಾಧಾನವನ್ನು ಸಮ್ಮೇಳನ ವ್ಯಕ್ತಪಡಿಸಿತು.