ಭಾಲ್ಕಿ: ತಾಲ್ಲೂಕಿನ ಖಟಕ ಚಿಂಚೋಳಿ ಗ್ರಾಮದ ನೀಲಮ್ಮ ವಿ.ಪಾಟೀಲ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಶುಕ್ರವಾರ ಸನ್ಮಾನಿಸಲಾಯಿತು.
ಕಾರ್ಯದರ್ಶಿ ಮಲ್ಲಿಕಾರ್ಜುನ ಪಾಟೀಲ ಮಾತನಾಡಿ, ‘ಸತತ ಪ್ರಯತ್ನದಿಂದ ಹೆಚ್ಚಿನ ಸಾಧನೆ ಮಾಡಲು ಸಾಧ್ಯ. ಎಲ್ಲ ವಿದ್ಯಾರ್ಥಿಗಳು ಸಮಯ ಪಾಲನೆ ಮಾಡಬೇಕು. ಗುರಿ ಇಟ್ಟುಕೊಂಡು ಅದನ್ನು ಮುಟ್ಟಲು ಅಧ್ಯಯನ ಮಾಡಬೇಕು’ ಎಂದರು.
ಹರೀಶ ಗೋಪಾಲರಾವ್, ಮಲ್ಲಿಕಾರ್ಜುನ ಚಿತ್ತೇಂದ್ರ, ಶಿವಪುತ್ರ, ಶಾಂತಕುಮಾರ ಅನಿಲ್ಕುಮಾರ, ಮಹ್ಮದ್ ಅಹ್ಮದ್, ಪ್ರಕಾಶ ವಿಲಾಸರಾವ್, ಗಾಯತ್ರಿ ದಯಾನಂದ, ಪ್ರಗತಿ ಮಹೇಂದ್ರಕುಮಾರ, ಅಭಿಷೇಕ ಮಲ್ಲಿಕಾರ್ಜುನ ಅವರನ್ನು ಸನ್ಮಾನಿಸಲಾಯಿತು.
ಪ್ರಮುಖರಾದ ರಾಮಶೆಟ್ಟಿ ಭೂಗಶೆಟ್ಟಿ, ಪ್ರಾಚಾರ್ಯ ಮಹಾದೇವ ಲಕ್ಕಾ, ಮುಖ್ಯಶಿಕ್ಷಕ ಶಂಕರರಾವ್ ನೆಲವಾಡೆ ಇದ್ದರು.