ಮೈಸೂರಿನ ದಸರಾ ಉತ್ಸವದಲ್ಲಿ, ಅಯ್ಯನಗುಡಿ ಉತ್ಸವ, 2004ರಲ್ಲಿ ಉಡುಪಿಯ ಪರ್ಯಾಯ ಉತ್ಸವ, ಗೌರಿಬಿದನೂರಿನಲ್ಲಿ ನಡೆದ ಕುವೆಂಪು ಅವರ ಜನ್ಮ ಶತಮಾನೋತ್ಸವ, 2007ರಲ್ಲಿ ಶಿವಮೊಗ್ಗ ಜಿಲ್ಲೆಯ ಹೊಸ ನಗರದಲ್ಲಿ ರಾಮಚಂದ್ರಾಪುರ ಮಠದಲ್ಲಿ ನಡೆದ ವಿಶ್ವ ಗೋ ಸಮ್ಮೇಳನ, 2012ರಲ್ಲಿ ಕರ್ನಾಟಕ ಜಾನಪದ ಸಂಗೀತ ಕಲಾ ಪರಿಷತ್ತಿನ ಆಶ್ರಯದಲ್ಲಿ ನಡೆದ 2ನೇ ಅಖಿಲ ಭಾರತ ಕರ್ನಾಟಕ ಜಾನಪದ ಚರ್ಮವಾದ್ಯ ಸಮ್ಮೇಳನ, 2014ರಲ್ಲಿ ಹಂಪಿಯಲ್ಲಿ ನಡೆದ ಹಸ್ತಪ್ರತಿ ಸಮ್ಮೇಳನ, ಬೆಂಗಳೂರಿನಲ್ಲಿ ನಡೆದ ಸುಗ್ಗಿ ಹುಗ್ಗಿ ಕಾರ್ಯಕ್ರಮ, 2006ರಲ್ಲಿ ಚಾಮರಾಜ ನಗರದಲ್ಲಿ ನಡೆದ ಗಡಿನಾಡ ಉತ್ಸವದಲ್ಲಿ, ಕಿತ್ತೂರು ಉತ್ಸವ, ಆಂಧ್ರ ಪ್ರದೇಶದ ಶ್ರೀಶೈಲಂನಲ್ಲಿ ನಡೆದ ಕಾರ್ಯಕ್ರಮ–ಹೀಗೆ ಅವರು ಪ್ರದರ್ಶನ ನೀಡಿದ ಪಟ್ಟಿ ಸಾಗುತ್ತದೆ.