‘ನೀರಿನ ಸಮಸ್ಯೆ ನಮ್ಮ ಮನೆ, ಊರು, ನಮ್ಮ ರಾಜ್ಯ, ದೇಶದ ಸಮಸ್ಯೆ ಅಷ್ಟೇ ಅಲ್ಲ. ಜಾಗತಿಕ ಸಮಸ್ಯೆಯಾಗಿದೆ. ನೀರನ್ನು ಇತಿಮಿತಿಯಲ್ಲಿ ಬಳಕೆ ಮಾಡಬೇಕು. ನೀರನ್ನು ಹೇಗೆ ಸಂರಕ್ಷಣೆ ಮಾಡಬೇಕು ಎಂಬ ಕಡೆಗೆ ಗಮನ ಕೊಡಬೇಕು. ಅಗತ್ಯಕ್ಕೆ ತಕ್ಕಷ್ಟು ಮಾತ್ರ ಆಹಾರ ಬಳಕೆ ಮಾಡಬೇಕು’ ಎಂದು ಧರ್ಮಗುರುಗಳು ಸಂದೇಶ ಸಾರುತ್ತಿದ್ದಾರೆ.