ಮುಂಬೈ: ಇಂಜೆಕ್ಷನ್ ಹಿಡಿದಿರುವ ವೈದ್ಯರನ್ನು ಕಂಡರೆ ಗಾಬರಿಯಾಗುವವರ ಪೈಕಿ ಮಕ್ಕಳು, ಹಿರಿಯರು, ವಯಸ್ಕರು ಎಂಬಿತ್ಯಾದಿ ಯಾವುದೇ ಭೇದವಿಲ್ಲ. ಇನ್ನೂ ರಕ್ತ ಪರೀಕ್ಷೆಗಾಗಿ ಕೈ ನೇರ ಮಾಡಿಸಿ, ಮುಷ್ಠಿ ಹಿಡಿಸಿ ಸೂಜಿ ನರದೊಳಗೆ ಇಳಿಸಿದರೆ...ಅಯ್ಯಯ್ಯೋ...! ಅದರಲ್ಲೂ ರಕ್ತನಾಳ ಸರಿಯಾಗಿ ಸಿಗದೇ ಹೋದರೆ, ನೋವಿ ಕಥೆ ಶುರು. ಐಐಟಿ ವಿದ್ಯಾರ್ಥಿ ಇದಕ್ಕೊಂದು ಪರಿಹಾರ ಕಂಡು ಹಿಡಿದಿದ್ದಾರೆ.