‘ಸೂಫಿಯಾನ ಕಲಾಂ’ ಏಕತೆ ಸಾರಿದರೆ, ರುಹಾನಿಯತ್ ಅಂದರೆ ಆತ್ಮದ ಜತೆ ಅನುಸಂಧಾನ ಕವ್ವಾಲಿಯ ತಿರುಳು. ದೇವರು ಗುಡಿ, ಗೋಪುರ, ಮಂದಿರ, ಮಸೀದಿ, ಚರ್ಚ್ಗಳಂತಹ ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಿಲ್ಲ. ದೇವರು ನಮ್ಮ ಶುದ್ಧ ಅಂತರಂಗದಲ್ಲಿ, ಹೃದಯದಲ್ಲಿ ನೆಲೆಸಿದ್ದಾನೆ ಎಂಬ ಸೂಫಿಗಳ ಮೂಲ ಸಂದೇಶವನ್ನು ನಿಜಾಮಿ ಸಹೋದರರು ತಮ್ಮ ಕಂಚಿನ ಕಂಠದ ಮೂಲಕ ದೇಶದಲ್ಲಿ ಹರಡುವ ಉದಾತ್ತ ಕೆಲಸದಲ್ಲಿ ತೊಡಗಿದ್ದಾರೆ.