<p>ಒಳಗೆ ನೆಲದಾಳವಲ್ಲ<br />ತುಸು ನೆಲದ ಹೊರಗೂ ಅಲ್ಲ<br />ಸರಿಸಮಪಾತ ನೆಟ್ಟ ಬೀಜ ಎತ್ತಬಲ್ಲದು ತಲೆ</p>.<p>ಕುದಿವ ಹಾಗಿಲ್ಲ ಕೊತಕೊತ<br />ತಣ್ಣಗೆ ಉಳಿವ ಹಾಗಿಲ್ಲ ಹಿಮದಂತೆ<br />ಹೆಪ್ಪಿಟ್ಟರೆ ಮಾತ್ರ ಘಮಿಸಬಲ್ಲದು ಕೆನೆಮೊಸರು</p>.<p>ಕಡೆದ ಹಾಗಲ್ಲ ನೆಲ ಕೆತ್ತಿದಂತೆ<br />ನಿಧಾನವಲ್ಲ ಬಳೆ ತೊಡಿಸಿದಂತೆ<br />ಲಯದಲಿ ತಿರುಗಿದರೆ ಅರಳಬಲ್ಲದು ನವನೀತ.</p>.<p>ಕಾದ ತವದ ಮೇಲೆ ಜಾಲಾಡಿದಂತಲ್ಲ<br />ಹೆಪ್ಪುಗಟ್ಟಿದ ನೀರು ಸುರಿಯುವಂತಿಲ್ಲ<br />ಹದವಾದ ಕಾವು ಕಣ್ಣ ಧರಿಸಬಲ್ಲದು ಮೊಟ್ಟೆ</p>.<p>ಕಾಯಬೇಕು ಕಾದಂತೆ ಮಾಗಬೇಕು<br />ಪದಗಳ ಮೆರವಣಿಗೆ ಅಲ್ಲ ಕವಿತೆ</p>.<p>ಮೆಲ್ಲಗೆ ಏರಿದಂತೆ ಹೂ ಮುಡಿಗೆ<br />ಮೂಗುತಿ ಮಿನುಗಿದಂತೆ ಕಣ್ಣ ನೆರಳಲಿ<br />ಹೊಸ್ತಿಲ ದಾಟಿದಂತೆ ಮಗು, ಬೆರಳು<br />ನುಣುಪಾಗಿ ಕುಂಕುಮ ಹಚ್ಚಿಕೊಂಡಂತೆ<br />ಬೆರಳ ಸಂಧಿಯಿಂದ ರಂಗೋಲಿ ನುಲಿದಂತೆ<br />ಬಿಡಿಸಿಕೊಂಡಂತೆ ಸೆರಗ ಮುಳ್ಳ ಬೇಲಿಯಿಂದ<br />ಹಾರಿ ಹೋದಂತೆ ಮೊದಲ ಬಾರಿ ಹಕ್ಕಿ ಬಾನಿಗೆ<br />ಈಜು ಕಲಿಸಿದಂತೆ ಮೀನು ಕರುಳ ಮರಿಗೆ<br />ಕಿವಿಯಲಿ ಹೇಳಿದಂತೆ ಮೊದಲ ಪ್ರೇಮವ<br />ಹೊಕ್ಕುಳಿನ ಬಳ್ಳಿ ಮೆಲ್ಲಗೆ ಕಟ್ಟಿದಂತೆ<br />ಬೆಳಗು ಮಗ್ಗುಲ ಬದಲಾಯಿಸಿದಂತೆ<br />ಕದಿವ ಚಿಟ್ಟೆ ಆ ಬದಿ ಮಕರಂದ ಬೆರೆಸಿದಂತೆ<br />ರೆಪ್ಪೆಗಳು ಧೂಳ ಜೊತೆ ಕದನಕ್ಕೆ ಇಳಿದಂತೆ</p>.<p>ಪದಗಳ ವೃಥಾ ಹತ್ಯೆ ಅಲ್ಲ ಕವಿತೆ<br />ಕವಿತೆ ಎಂದರೆ<br />ಕಾದ ಪದಗಳು ಹೆಣೆದ ಆತ್ಮದ ಬಟ್ಟೆ.<br /><em><strong>-ವಾಸುದೇವ ನಾಡಿಗ್</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಒಳಗೆ ನೆಲದಾಳವಲ್ಲ<br />ತುಸು ನೆಲದ ಹೊರಗೂ ಅಲ್ಲ<br />ಸರಿಸಮಪಾತ ನೆಟ್ಟ ಬೀಜ ಎತ್ತಬಲ್ಲದು ತಲೆ</p>.<p>ಕುದಿವ ಹಾಗಿಲ್ಲ ಕೊತಕೊತ<br />ತಣ್ಣಗೆ ಉಳಿವ ಹಾಗಿಲ್ಲ ಹಿಮದಂತೆ<br />ಹೆಪ್ಪಿಟ್ಟರೆ ಮಾತ್ರ ಘಮಿಸಬಲ್ಲದು ಕೆನೆಮೊಸರು</p>.<p>ಕಡೆದ ಹಾಗಲ್ಲ ನೆಲ ಕೆತ್ತಿದಂತೆ<br />ನಿಧಾನವಲ್ಲ ಬಳೆ ತೊಡಿಸಿದಂತೆ<br />ಲಯದಲಿ ತಿರುಗಿದರೆ ಅರಳಬಲ್ಲದು ನವನೀತ.</p>.<p>ಕಾದ ತವದ ಮೇಲೆ ಜಾಲಾಡಿದಂತಲ್ಲ<br />ಹೆಪ್ಪುಗಟ್ಟಿದ ನೀರು ಸುರಿಯುವಂತಿಲ್ಲ<br />ಹದವಾದ ಕಾವು ಕಣ್ಣ ಧರಿಸಬಲ್ಲದು ಮೊಟ್ಟೆ</p>.<p>ಕಾಯಬೇಕು ಕಾದಂತೆ ಮಾಗಬೇಕು<br />ಪದಗಳ ಮೆರವಣಿಗೆ ಅಲ್ಲ ಕವಿತೆ</p>.<p>ಮೆಲ್ಲಗೆ ಏರಿದಂತೆ ಹೂ ಮುಡಿಗೆ<br />ಮೂಗುತಿ ಮಿನುಗಿದಂತೆ ಕಣ್ಣ ನೆರಳಲಿ<br />ಹೊಸ್ತಿಲ ದಾಟಿದಂತೆ ಮಗು, ಬೆರಳು<br />ನುಣುಪಾಗಿ ಕುಂಕುಮ ಹಚ್ಚಿಕೊಂಡಂತೆ<br />ಬೆರಳ ಸಂಧಿಯಿಂದ ರಂಗೋಲಿ ನುಲಿದಂತೆ<br />ಬಿಡಿಸಿಕೊಂಡಂತೆ ಸೆರಗ ಮುಳ್ಳ ಬೇಲಿಯಿಂದ<br />ಹಾರಿ ಹೋದಂತೆ ಮೊದಲ ಬಾರಿ ಹಕ್ಕಿ ಬಾನಿಗೆ<br />ಈಜು ಕಲಿಸಿದಂತೆ ಮೀನು ಕರುಳ ಮರಿಗೆ<br />ಕಿವಿಯಲಿ ಹೇಳಿದಂತೆ ಮೊದಲ ಪ್ರೇಮವ<br />ಹೊಕ್ಕುಳಿನ ಬಳ್ಳಿ ಮೆಲ್ಲಗೆ ಕಟ್ಟಿದಂತೆ<br />ಬೆಳಗು ಮಗ್ಗುಲ ಬದಲಾಯಿಸಿದಂತೆ<br />ಕದಿವ ಚಿಟ್ಟೆ ಆ ಬದಿ ಮಕರಂದ ಬೆರೆಸಿದಂತೆ<br />ರೆಪ್ಪೆಗಳು ಧೂಳ ಜೊತೆ ಕದನಕ್ಕೆ ಇಳಿದಂತೆ</p>.<p>ಪದಗಳ ವೃಥಾ ಹತ್ಯೆ ಅಲ್ಲ ಕವಿತೆ<br />ಕವಿತೆ ಎಂದರೆ<br />ಕಾದ ಪದಗಳು ಹೆಣೆದ ಆತ್ಮದ ಬಟ್ಟೆ.<br /><em><strong>-ವಾಸುದೇವ ನಾಡಿಗ್</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>