<p>ಆಂಟಿಯು ಮನೆಯಲಿ ಒಂಟಿಯಿರುವಾಗ<br />ಕೈಗನ್ನಡಿ ಕೆಳಜಾರಿತ್ತು<br />ಒಂಟಿಮನೆಯಲ್ಲಿ ಇಂಥ ಅಪಶಕುನ<br />ಕೇಡೆಂದವರಿಗೆ ತೋರಿತ್ತು</p>.<p>ಗಂಡನ ಸಂಗಡ ಆ್ಯಂಟಿಯು ಹೊರಟಳು<br />ಊರಿನ ಜ್ಯೋತಿಷಿ ಬಳಿಯಲ್ಲಿ<br />“ಉಂಡು ಉಟ್ಟು ಬೆಳೆಯುವ ಮನೆಯಲ್ಲಿ<br />ಅಶುಭವೇನು?” ಕೇಳಿದರಲ್ಲಿ!</p>.<p>ಜ್ಯೋತಿಷಿ ಹೇಳಿದ- “ವಾಸದಮನೆಯಲಿ<br />ಕನ್ನಡಿ ಒಡೆವುದಮಂಗಳವು<br />ಬೆಳ್ಳಿಯ ಕನ್ನಡಿ ಕಾಟೇರಮ್ಮನ<br />ಗುಡಿಗೆ ನೀಡಿದರೆ ಮಂಗಳವು!”</p>.<p>ಪುಟ್ಟನು ಶಾಲೆಯ ಮಾಸ್ತರ ಕೇಳಿದ-<br />“ಗುರುಗಳೆ, ಒಡೆದರೆ ಕನ್ನಡಿಯು<br />ಕಾಟೇರಮ್ಮನ ಗುಡಿಗೆ ಕನ್ನಡಿಯ<br />ಕೊಡಬೇಕೇತಕೆ ಈ ಪರಿಯು?”</p>.<p>ಗುರುಗಳು ನುಡಿದರು- “ಪುಟ್ಟಾ ಆಲಿಸು<br />ಹೋದರೆ ವೈದ್ಯರ ಬಳಿಯಲ್ಲಿ<br />ಮಾತ್ರೆಯ ತಪ್ಪದೆ ಕೊಟ್ಟೇಕೊಡುವರು<br />ರೋಗವು ಇರಲಿ, ಇರದಿರಲಿ!</p>.<p>ಹಾಗೆಯೆ ಜ್ಯೋತಿಷಿ ಬಳಿಯಲಿ ಹೋದರೆ<br />ಹೇಳದೆ ಇರುವರೆ ಪರಿಹಾರ?<br />ರೋಗವು ಮನಸಿಗೆ ಎಂದರಿತಿರುವರು<br />ಅವರಿಗೆ ವೃತ್ತಿಯ ವ್ಯವಹಾರ!</p>.<p>ಮೂಡನಂಬಿಕೆಯು ಇರುವವರೆವಿಗೂ<br />ಕಾಡುತಲಿರುವರು ಮೂಢರನು<br />ಮೌಢ್ಯವನ್ನು ಹೊರದೂಡಿದ್ದಾದರೆ<br />ಕಂಡುಕೊಳಬಹುದು ಸತ್ಯವನು”</p>.<p>ಪುಟ್ಟನು ಮನದಲಿ ವಿಚಾರ ಮಾಡಿ<br />ಮೌಢ್ಯವನ್ನು ಹೊರದೂಡಿದನು<br />ಮೂಢನಂಬಿಕೆಯ ಮೂಲೆಗೆ ತಳ್ಳಿ<br />ಸತ್ಯದ ದರುಶನ ಮಾಡಿದನು!</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p>ಆಂಟಿಯು ಮನೆಯಲಿ ಒಂಟಿಯಿರುವಾಗ<br />ಕೈಗನ್ನಡಿ ಕೆಳಜಾರಿತ್ತು<br />ಒಂಟಿಮನೆಯಲ್ಲಿ ಇಂಥ ಅಪಶಕುನ<br />ಕೇಡೆಂದವರಿಗೆ ತೋರಿತ್ತು</p>.<p>ಗಂಡನ ಸಂಗಡ ಆ್ಯಂಟಿಯು ಹೊರಟಳು<br />ಊರಿನ ಜ್ಯೋತಿಷಿ ಬಳಿಯಲ್ಲಿ<br />“ಉಂಡು ಉಟ್ಟು ಬೆಳೆಯುವ ಮನೆಯಲ್ಲಿ<br />ಅಶುಭವೇನು?” ಕೇಳಿದರಲ್ಲಿ!</p>.<p>ಜ್ಯೋತಿಷಿ ಹೇಳಿದ- “ವಾಸದಮನೆಯಲಿ<br />ಕನ್ನಡಿ ಒಡೆವುದಮಂಗಳವು<br />ಬೆಳ್ಳಿಯ ಕನ್ನಡಿ ಕಾಟೇರಮ್ಮನ<br />ಗುಡಿಗೆ ನೀಡಿದರೆ ಮಂಗಳವು!”</p>.<p>ಪುಟ್ಟನು ಶಾಲೆಯ ಮಾಸ್ತರ ಕೇಳಿದ-<br />“ಗುರುಗಳೆ, ಒಡೆದರೆ ಕನ್ನಡಿಯು<br />ಕಾಟೇರಮ್ಮನ ಗುಡಿಗೆ ಕನ್ನಡಿಯ<br />ಕೊಡಬೇಕೇತಕೆ ಈ ಪರಿಯು?”</p>.<p>ಗುರುಗಳು ನುಡಿದರು- “ಪುಟ್ಟಾ ಆಲಿಸು<br />ಹೋದರೆ ವೈದ್ಯರ ಬಳಿಯಲ್ಲಿ<br />ಮಾತ್ರೆಯ ತಪ್ಪದೆ ಕೊಟ್ಟೇಕೊಡುವರು<br />ರೋಗವು ಇರಲಿ, ಇರದಿರಲಿ!</p>.<p>ಹಾಗೆಯೆ ಜ್ಯೋತಿಷಿ ಬಳಿಯಲಿ ಹೋದರೆ<br />ಹೇಳದೆ ಇರುವರೆ ಪರಿಹಾರ?<br />ರೋಗವು ಮನಸಿಗೆ ಎಂದರಿತಿರುವರು<br />ಅವರಿಗೆ ವೃತ್ತಿಯ ವ್ಯವಹಾರ!</p>.<p>ಮೂಡನಂಬಿಕೆಯು ಇರುವವರೆವಿಗೂ<br />ಕಾಡುತಲಿರುವರು ಮೂಢರನು<br />ಮೌಢ್ಯವನ್ನು ಹೊರದೂಡಿದ್ದಾದರೆ<br />ಕಂಡುಕೊಳಬಹುದು ಸತ್ಯವನು”</p>.<p>ಪುಟ್ಟನು ಮನದಲಿ ವಿಚಾರ ಮಾಡಿ<br />ಮೌಢ್ಯವನ್ನು ಹೊರದೂಡಿದನು<br />ಮೂಢನಂಬಿಕೆಯ ಮೂಲೆಗೆ ತಳ್ಳಿ<br />ಸತ್ಯದ ದರುಶನ ಮಾಡಿದನು!</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>