ಶನಿವಾರ, ಮಾರ್ಚ್ 25, 2023
29 °C

ದೀಪಾವಳಿ ಕವನ ಸ್ಪರ್ಧೆ: ತೀರ್ಪುಗಾರರ ಮೆಚ್ಚುಗೆ ಪಡೆದ ಕವನ– ಗಜ಼ಲ್

ಅಶ್ಫಾಕ್ ಪೀರ್ Updated:

ಅಕ್ಷರ ಗಾತ್ರ : | |

Prajavani

ಈ ವ್ಯವಸ್ಥೆ ನನ್ನ ಕಣ್ಣು ಕಟ್ಟಿದೆ ಏನು ಮಾಡಲಿ
ಆ ಆವಸ್ಥೆ ನನ್ನ ನಾಲಿಗೆ ಸುಟ್ಟಿದೆ ಏನು ಮಾಡಲಿ

ಲೆಕ್ಕಣಿಕೆಗೆ ಕ್ರಾಂತಿಯ ಭಾಷೆ ಕಲಿಸಬೇಕಾದ ತುರ್ತು
ನೆತ್ತರು ಶಾಯಿಯಾಗಿ ಹೆಪ್ಪುಗಟ್ಟಿದೆ ಏನು ಮಾಡಲಿ

ಶಾಂತಿಯ ತೋಟದಲಿ ಸಾವಿನಾ ಆರ್ಭಟ ನೋಡು
ಆಕ್ರಂದನ ಮುಗಿಲು ಮುಟ್ಟಿದೆ ಏನು ಮಾಡಲಿ

ದೇಶ ಸುಡುವಾಗ ಪಿಟೀಲು ನುಡಿಸಿದ ರೋಮ ದೊರೆ
ಬಡಪ್ರಜೆಗಳ ಕಣ್ಣೀರು ಶಾಪ ತಟ್ಟಿದೆ ಏನು ಮಾಡಲಿ

ಸಾವಿನ ಸಂತೆಯಲಿ ಸೌದಾಗರ*ರದೆ ಅಧಿಪತ್ಯ
ಮಿಥ್ಯ ಮಾನವೀಯತೆ ಮೆಟ್ಟಿದೆ ಏನು ಮಾಡಲಿ

ಅನ್ನ ಹಾಕುವ ಪ್ರಭುಗೆ ಋಣಿಯಾಗಿರಬೇಕು ಪೀರ್
ಬೇಲಿಯೇ ಹೊಲಕೆ ಕೊಳ್ಳಿ ಇಟ್ಟಿದೆ ಏನು ಮಾಡಲಿ.

(* ವ್ಯಾಪಾರಿ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು