<p><strong>ಸೊರಬ</strong>: `ಮೆಸ್ಕಾಂನ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆ ಮಿತಿ ಮೀರಿದೆ. ಅವರನ್ನು ನಿಯಂತ್ರಣದಲ್ಲಿ ಇಡಲಾಗದ ಇಲಾಖೆ ಸಚಿವರು ರಾಜೀನಾಮೆ ನೀಡುವುದೇ ಲೇಸು~ ಎಂದು ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಕೆ. ಮಂಜುನಾಥಗೌಡ ಸಲಹೆ ನೀಡಿದರು.<br /> <br /> ಅಕ್ರಮ ಸಕ್ರಮಕ್ಕೆ ಹತ್ತಾರು ವರ್ಷಗಳ ಹಿಂದೆ ಸಾವಿರಾರು ರೂಪಾಯಿ ಕಟ್ಟಿಸಿಕೊಂಡಿದ್ದರೂ, ಇಲಾಖೆ ಸಕ್ರಮ ಮಾಡಲು ಮುಂದಾಗಿಲ್ಲ ಎಂದು ಆರೋಪಿಸಿ ಸಂಘದ ತಾಲ್ಲೂಕು ಘಟಕ ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.<br /> <br /> 1997ರಿಂದ 2005ರವರೆಗೆ ಪಂಪ್ಸೆಟ್ ಸಂಪರ್ಕದ ಸಕ್ರಮಕ್ಕೆ ರೈತರು ್ಙ 14ರಿಂದ 16 ಸಾವಿರ ಪಾವತಿಸಿ, ರಸೀದಿ ಇಟ್ಟುಕೊಂಡಿದ್ದಾರೆ. ಆದರೆ, ಸಕ್ರಮ ಈವರೆಗೆ ಆಗಿಲ್ಲ. ಈ ಕುರಿತು ಇಲಾಖೆಯಲ್ಲಿ ವಿಚಾರಿಸಿದರೆ ಸರಿಯಾದ ಮಾಹಿತಿ ನೀಡುತ್ತಿಲ್ಲ. `ಸೀನಿಯಾರಿಟಿ ಬಂದಿಲ್ಲ, ರೀ ಎಸ್ಟಿಮೇಟ್ ಮಾಡಬೇಕು. ಸಾಮಗಿ ದರ ಹೆಚ್ಚಾಗಿದೆ~ ಎಂದು ಸಬೂಬು ನೀಡುತ್ತಾರೆ. ರೈತರನ್ನು ವಂಚನೆ ಮಾಡುತ್ತಿದ್ದಾರೆ. 10-15 ವರ್ಷಗಳ ಹಿಂದೆ ಹಣ ಕಟ್ಟಿಸಿಕೊಂಡು ಈಗ ಮೀನಾಮೇಷ ಎಣಿಸಿದರೆ ಅದಕ್ಕೆ ರೈತರು ಹೊಣೆಗಾರರೇ ಎಂದು ಪ್ರಶ್ನಿಸಿದರು. ಸಮರ್ಪಕ ಮಾಹಿತಿ ನೀಡದೇ ಬೇಜವಾಬ್ದಾರಿಯುತವಾಗಿ ವರ್ತಿಸುತ್ತಿದ್ದಾರೆ ಎಂದರು. <br /> <br /> ತಾಲ್ಲೂಕಿನ ಆನವಟ್ಟಿ, ಜಡೆ ಭಾಗಗಳಿಂದಲೇ ಸುಮಾರು 500 ಇಂತಹ ಪ್ರಕರಣಗಳು ಕಂಡು ಬಂದಿವೆ ಎಂದು ಘಟಕದ ಅಧ್ಯಕ್ಷ ಬಿ. ವೀರಭಧ್ರಗೌಡ ತಿಳಿಸಿದರು.<br /> <br /> ಭತ್ತದ ಬೆಂಬಲ ಬೆಲೆ ತೀರಾ ಅವೈಜ್ಞಾನಿಕ ಆಗಿದ್ದು ಪರಿಷ್ಕರಣೆ ಮಾಡುವಂತೆ ಒತ್ತಾಯಿಸಿದರು.ಕುಬಟೂರಿನ ನಿಂಗಪ್ಪ ಮಾಸ್ತರ್ 2005ರಲ್ಲಿ ್ಙ 16.50 ಸಾವಿರ, ಬಸವಂತಪ್ಪ 2002ರಲ್ಲಿ 14.50 ಸಾವಿರ ಹಣ ಪಾವತಿ ಮಾಡಿರುವ ಬಗ್ಗೆ ರಶೀದಿ ಹಾಜರುಪಡಿಸಿದರು.<br /> <br /> ವಿದ್ಯುತ್ ಪೂರೈಕೆ ವಿಚಾರದ್ಲ್ಲಲಿ ಸರ್ಕಾರದಿಂದ ಹಳ್ಳಿ-ನಗರಗಳ ಮಧ್ಯೆ ತಾರತಮ್ಯ ನೀತಿ ಮುಂದುವರೆಸಿದೆ. ರೈತರನ್ನು ಕತ್ತಲಲ್ಲಿ ಇಟ್ಟು, ಚಳುವಳಿಗಾರರನ್ನು ಜೈಲಿಗೆ ತಳ್ಳಲಾಗುತ್ತಿದೆ. ರೈತ ವಿರೋಧಿ ನೀತಿ ಮಿತಿ ಮೀರುತ್ತಿದೆ ಎಂದು ಆರೋಪಿಸಿದ ಮಂಜುನಾಥಗೌಡ, ಇದನ್ನು ಖಂಡಿಸಿ ಅ. 19ರ ಸಂಜೆ ಬೆಂಗಳೂರಿನ ರೈಲುನಿಲ್ದಾಣದಿಂದ ವಿಧಾನಸೌಧವರೆಗೆ ಸಂಘದ ವತಿಯಿಂದ `ಲಾಟೀನು ಮೆರವಣಿಗೆ~ ನಡೆಸಲಿದ್ದು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು. ಸಂಘದ ಪದಾಧಿಕಾರಿಗಳು, ರೈತರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸೊರಬ</strong>: `ಮೆಸ್ಕಾಂನ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆ ಮಿತಿ ಮೀರಿದೆ. ಅವರನ್ನು ನಿಯಂತ್ರಣದಲ್ಲಿ ಇಡಲಾಗದ ಇಲಾಖೆ ಸಚಿವರು ರಾಜೀನಾಮೆ ನೀಡುವುದೇ ಲೇಸು~ ಎಂದು ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಕೆ. ಮಂಜುನಾಥಗೌಡ ಸಲಹೆ ನೀಡಿದರು.<br /> <br /> ಅಕ್ರಮ ಸಕ್ರಮಕ್ಕೆ ಹತ್ತಾರು ವರ್ಷಗಳ ಹಿಂದೆ ಸಾವಿರಾರು ರೂಪಾಯಿ ಕಟ್ಟಿಸಿಕೊಂಡಿದ್ದರೂ, ಇಲಾಖೆ ಸಕ್ರಮ ಮಾಡಲು ಮುಂದಾಗಿಲ್ಲ ಎಂದು ಆರೋಪಿಸಿ ಸಂಘದ ತಾಲ್ಲೂಕು ಘಟಕ ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.<br /> <br /> 1997ರಿಂದ 2005ರವರೆಗೆ ಪಂಪ್ಸೆಟ್ ಸಂಪರ್ಕದ ಸಕ್ರಮಕ್ಕೆ ರೈತರು ್ಙ 14ರಿಂದ 16 ಸಾವಿರ ಪಾವತಿಸಿ, ರಸೀದಿ ಇಟ್ಟುಕೊಂಡಿದ್ದಾರೆ. ಆದರೆ, ಸಕ್ರಮ ಈವರೆಗೆ ಆಗಿಲ್ಲ. ಈ ಕುರಿತು ಇಲಾಖೆಯಲ್ಲಿ ವಿಚಾರಿಸಿದರೆ ಸರಿಯಾದ ಮಾಹಿತಿ ನೀಡುತ್ತಿಲ್ಲ. `ಸೀನಿಯಾರಿಟಿ ಬಂದಿಲ್ಲ, ರೀ ಎಸ್ಟಿಮೇಟ್ ಮಾಡಬೇಕು. ಸಾಮಗಿ ದರ ಹೆಚ್ಚಾಗಿದೆ~ ಎಂದು ಸಬೂಬು ನೀಡುತ್ತಾರೆ. ರೈತರನ್ನು ವಂಚನೆ ಮಾಡುತ್ತಿದ್ದಾರೆ. 10-15 ವರ್ಷಗಳ ಹಿಂದೆ ಹಣ ಕಟ್ಟಿಸಿಕೊಂಡು ಈಗ ಮೀನಾಮೇಷ ಎಣಿಸಿದರೆ ಅದಕ್ಕೆ ರೈತರು ಹೊಣೆಗಾರರೇ ಎಂದು ಪ್ರಶ್ನಿಸಿದರು. ಸಮರ್ಪಕ ಮಾಹಿತಿ ನೀಡದೇ ಬೇಜವಾಬ್ದಾರಿಯುತವಾಗಿ ವರ್ತಿಸುತ್ತಿದ್ದಾರೆ ಎಂದರು. <br /> <br /> ತಾಲ್ಲೂಕಿನ ಆನವಟ್ಟಿ, ಜಡೆ ಭಾಗಗಳಿಂದಲೇ ಸುಮಾರು 500 ಇಂತಹ ಪ್ರಕರಣಗಳು ಕಂಡು ಬಂದಿವೆ ಎಂದು ಘಟಕದ ಅಧ್ಯಕ್ಷ ಬಿ. ವೀರಭಧ್ರಗೌಡ ತಿಳಿಸಿದರು.<br /> <br /> ಭತ್ತದ ಬೆಂಬಲ ಬೆಲೆ ತೀರಾ ಅವೈಜ್ಞಾನಿಕ ಆಗಿದ್ದು ಪರಿಷ್ಕರಣೆ ಮಾಡುವಂತೆ ಒತ್ತಾಯಿಸಿದರು.ಕುಬಟೂರಿನ ನಿಂಗಪ್ಪ ಮಾಸ್ತರ್ 2005ರಲ್ಲಿ ್ಙ 16.50 ಸಾವಿರ, ಬಸವಂತಪ್ಪ 2002ರಲ್ಲಿ 14.50 ಸಾವಿರ ಹಣ ಪಾವತಿ ಮಾಡಿರುವ ಬಗ್ಗೆ ರಶೀದಿ ಹಾಜರುಪಡಿಸಿದರು.<br /> <br /> ವಿದ್ಯುತ್ ಪೂರೈಕೆ ವಿಚಾರದ್ಲ್ಲಲಿ ಸರ್ಕಾರದಿಂದ ಹಳ್ಳಿ-ನಗರಗಳ ಮಧ್ಯೆ ತಾರತಮ್ಯ ನೀತಿ ಮುಂದುವರೆಸಿದೆ. ರೈತರನ್ನು ಕತ್ತಲಲ್ಲಿ ಇಟ್ಟು, ಚಳುವಳಿಗಾರರನ್ನು ಜೈಲಿಗೆ ತಳ್ಳಲಾಗುತ್ತಿದೆ. ರೈತ ವಿರೋಧಿ ನೀತಿ ಮಿತಿ ಮೀರುತ್ತಿದೆ ಎಂದು ಆರೋಪಿಸಿದ ಮಂಜುನಾಥಗೌಡ, ಇದನ್ನು ಖಂಡಿಸಿ ಅ. 19ರ ಸಂಜೆ ಬೆಂಗಳೂರಿನ ರೈಲುನಿಲ್ದಾಣದಿಂದ ವಿಧಾನಸೌಧವರೆಗೆ ಸಂಘದ ವತಿಯಿಂದ `ಲಾಟೀನು ಮೆರವಣಿಗೆ~ ನಡೆಸಲಿದ್ದು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು. ಸಂಘದ ಪದಾಧಿಕಾರಿಗಳು, ರೈತರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>